Advertisement

‘ನಾನು ಸನ್ಯಾಸಿಯಾಗಿಲ್ಲ’ : ಬಿಗ್ ಬಾಸ್ ಮಾಜಿ ಸ್ಪರ್ಧಿ  ಚೈತ್ರಾ ಕೊಟೂರ್  ಸ್ಪಷ್ಟನೆ

04:34 PM Jul 23, 2021 | Team Udayavani |

ಕನ್ನಡ ಚಲನಚಿತ್ರ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಚೈತ್ರಾ ಕೊಟೂರ್  ಮದುವೆ ಮುರಿದ ಬಿದ್ದ ನಂತರ ಆಧ್ಯಾತ್ಮ ಕಡೆಗೆ ವಾಲಿದ್ದಾರೆ. ತಮ್ಮ ಹೆಸರನ್ನು ಬದಲಿಸಿಕೊಂಡು ಸನ್ಯಾಸ ಸ್ವೀಕರಿಸಿದ್ದಾರೆ ಎನ್ನುವ ಗುಲ್ಲು ಕೇಳಿ ಬಂದಿತ್ತು. ಅದಕ್ಕೆ ಕಾರಣ ಸ್ವತಃ ಚೈತ್ರಾ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದ ಕೆಲವು ಪೋಸ್ಟ್ ಗಳು. ಆದರೆ, ಇದೀಗ ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದು ನಾನು ಸನ್ಯಾಸಿಯಾಗಿಲ್ಲ ಎಂದಿದ್ದಾರೆ.

Advertisement

ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಚೈತ್ರಾ, ‘ಓಶೋ ಸನ್ಯಾಸ ದೀಕ್ಷೆ ಅಂದರೆ, ಎಲ್ಲವನ್ನೂ ತ್ಯಜಿಸುವುದಲ್ಲ! ಮಠವಂತೂ ಅಲ್ಲವೇ ಅಲ್ಲ! ಎಲ್ಲದರೊಳಗೇ ಇದ್ದುಕೊಂಡು ಬದುಕನ್ನು ಹೆಚ್ಚು ಸಂತೋಷಮಯವಾಗಿ, ಅರ್ಥಪೂರ್ಣವಾಗಿ ಬದುಕುವುದು’ ಎಂದಿದ್ದಾರೆ.

ಇನ್ನು ಏಪ್ರಿಲ್ ತಿಂಗಳಲ್ಲಿ ಚೈತ್ರಾ ಕೊಟೂರು, ನಾಗಾರ್ಜುನ ಎಂಬುವರೊಟ್ಟಿಗೆ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಆದರೆ ವಿವಾಹವಾದ ದಿನವೇ ಪೊಲೀಸ್ ಠಾಣೆ ಮೆಟ್ಟಿಲು ಏರಿ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಬಲವಂತದಿಂದ ಮದುವೆ ಮಾಡಲಾಗಿದೆ ಎಂದು ನಾಗಾರ್ಜುನ ದೂರು ನೀಡಿದ್ದರು. ಇದಾದ ಬಳಿಕ ಚೈತ್ರಾ ಕೊಟೂರು ಆತ್ಮಹತ್ಯೆಗೆ ಯತ್ನಿಸಿದ್ದರು. ಇದೆಲ್ಲ ವಿವಾದಗಳ ಬಳಿಕ ಈಗ ಅಧ್ಯಾತ್ಮದ ಕಡೆಗೆ ವಾಲಿಕೊಂಡಿದ್ದಾರೆ ಚೈತ್ರಾ.

ಚೈತ್ರಾ ಓಶೋ ಧ್ಯಾನ ಶಿಬಿರ ಸೇರಿಕೊಂಡಿದ್ದಾರೆ. ಅಧ್ಯಾತ್ಮಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುತ್ತಿದ್ದಾರೆ. ಆ ಕ್ಷಣಗಳ ಹಲವು ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ತಮ್ಮ ಹೆಸರನ್ನು ಮಾ ಪ್ರಗ್ಯಾ ಭಾರತಿ ಎಂದು ಬದಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next