Advertisement

Kanakagiri : ಸೇವೆಗೆ ಸೇರಿ ಮೊದಲ ಬಾರಿ ಹುಟ್ಟೂರಿಗೆ ಬಂದ ಯೋಧನಿಗೆ ಅದ್ದೂರಿ ಸ್ವಾಗತ

09:05 PM Dec 14, 2023 | Team Udayavani |

ಕನಕಗಿರಿ: ಭಾರತೀಯ ಸೇನೆಗೆ ಸೇರಿದ ಬಳಿಕ ಮೊದಲ ಬಾರಿಗೆ ಹುಟ್ಟೂರಿಗೆ ಆಗಮಿಸಿದ ಯೋಧನಿಗೆ ಹುಟ್ಟೂರಿನಲ್ಲಿ ಆತ್ಮೀಯ ಸ್ವಾಗತ ನೀಡಿದ ಘಟನೆ ನವಲಿ ಗ್ರಾಮದಲ್ಲಿ ಗುರುವಾರ ನಡೆದಿದೆ.

Advertisement

ಗ್ರಾಮಕ್ಕೆ ಆಗಮಿಸಿದ ಯೋಧ ಬಸವರಾಜ ( ಹಿರೇರಾಮಣ್ಣ ಕಂಬ್ಳಿ ಅವರ ಪುತ್ರ)ಅವರಿಗೆ ಗ್ರಾಮದ ಮಾಕಣ್ಣ ಕಂಬ್ಳಿ ವೃತ್ತದಲ್ಲಿ ಹಿರಿಯರು, ಶಾಲಾ ಮಕ್ಕಳು ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಹೂಮಾಲೆ ಹಾಕಿ ಸ್ವಾಗತಿಸಿದರು, ವಿದ್ಯಾರ್ಥಿಗಳು ಪುಷ್ಪಎರಚಿ ಭಾರತ್ ಮಾತಾ ಕೀ ಜೈ, ಜೈ ಹಿಂದ್ ಎಂಬ ಘೋಷಣೆ ಕೂಗುತ್ತಾ ಸ್ವಾಗತಿಸಿದರು.

ಯುವ ಸೈನಿಕ ಬಸವರಾಜ ಕಂಬ್ಳಿ ಮಾತನಾಡಿ, ನಮ್ಮೂರ ಗ್ರಾಮಸ್ಥರು ಶಾಲಾ ಮಕ್ಕಳ ಇಂತಹ ಅದ್ದೂರಿ ಸ್ವಾಗತ ದೇಶ ಕಾಯುವ ಪ್ರತಿ ಒಬ್ಬ ಸೈನಿಕರಿಗೆ ಗೌರವ ಸನ್ಮಾನವನ್ನು ಸಮರ್ಪಿಸುತ್ತೇನೆ ಎಂದರು.

ವಿರುಪಣ್ಣ ಕಲ್ಲೂರು ಮಾತನಾಡಿ, ಸೈನಿಕನಾಗಿ ಮಾಡುವ ಸೇವೆ ಸ್ವಾರ್ಥ ರಹಿತ ಸೇವೆ, ಪ್ರಾಣದ ಹಂಗನ್ನುತೊರೆದು ದೇಶದ ರಕ್ಷಣೆ ಮಾಡುವ ಸೈನಿಕರಿಗೆ ಪ್ರತಿಯೊಬ್ಬ ನಾಗರಿಕನೂ ಗೌರವಸಲ್ಲಿಸಬೇಕು ಎಂದರು. ಪ್ರೌಢ ಶಾಲೆ ಮುಖ್ಯಪಾಧ್ಯಾಯರು, ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ಹನುಮಂತಪ್ಪ ಕಲ್ಲೂರು, ಸಿದ್ದನಗೌಡ ಮಾ. ಪಾ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next