Advertisement

ಕೋವಿಡ್ ಸಂಕಷ್ಟ ಪರಿಹಾರಕ್ಕೆ ಪೂಜೆ

05:54 PM Apr 27, 2020 | Naveen |

ಕಂಪ್ಲಿ: ಪಟ್ಟಣದಲ್ಲಿ ಮಹಾಮಾರಿ ಕೋವಿಡ್ ಸಂಕಷ್ಟ ಪರಿಹಾರಕ್ಕೆ ಸಂಕಲ್ಪಿಸಿ ಕಂಪ್ಲಿಯ ದೇವಾಂಗಪೇಟೆಯಲ್ಲಿನ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ವಿವಿಧ ಸದ್ಭಕ್ತರು ರಾಮಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

Advertisement

ದೇವಸ್ಥಾನದಲ್ಲಿ ಅರ್ಚಕ ಮಿಟ್ಟಿ ಶಂಕರ್‌ ನೇತೃತ್ವದಲ್ಲಿ ಗಣಪತಿ ಪೂಜೆ, ಉಮಾಮಹೇಶ್ವರ ಕಳಸ ಪ್ರತಿಷ್ಠಾಪನೆ ಪೂಜೆಯೊಂದಿಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಅಭಿಷೇಕಗಳನ್ನು ಹಾಗೂ ಸಹಸ್ರ ಬಿಲ್ವಾರ್ಚನೆ ಸೇರಿದಂತೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ನಂತರ ಮಹಾಮಂಗಳಾರತಿ ನಂತರ ಪ್ರಸಾದ ವಿತರಣೆ ಮಾಡಿದರು. ಮಾರಕ ಕೋವಿಡ್ ವೈರಸ್‌ ಹಿನ್ನೆಲೆಯಲ್ಲಿ ಕೆಲವೇ ಸಾರ್ವಜನಿಕರು ಸಾಮಾಜಿಕ ಅಂತರದಲ್ಲಿ ಭಾಗವಹಿಸಿದ್ದರು. ಪುಟ್ಟಿ ರಾಘವೇಂದ್ರ, ಬಂಗಿ ಸಣ್ಣಮಂಜುನಾಥ, ದೂಪದ ಸುಭಾಶ್ಚಂದ್ರ, ದೂಪದ ಪ್ರಶಾಂತ್‌ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next