Advertisement

ರಾಜಕೀಯ ಇರುವವರೆಗೂ ಮಕ್ಕಳ್​ ನೀಧಿ ಮೈಯಮ್ ಪಕ್ಷ ಇರುತ್ತದೆ : ಕಮಲ್ ಹಾಸನ್

02:03 PM May 25, 2021 | Team Udayavani |

ಚೆನ್ನೈ (ತಮಿಳುನಾಡು): ವಿಧಾನಸಭೆ ಚುನಾವಣೆಯಲ್ಲಿ ಸೋಲನ್ನು ಕಂಡಿದ್ದರೂ ಕೂಡ ನಟ , ಮಕ್ಕಳ್​ ನೀಧಿ ಮೈಯಮ್​​ (ಎಂಎನ್​ಎಂ) ಪಕ್ಷದ ಸಂಸ್ಥಾಪಕ, ಕಮಲ್​ ಹಾಸನ್ ತನ್ನ ಕೊನೆಯ ಉಸಿರು ಇರುವವರೆಗೆ ತಾವು ರಾಜಕೀಯದಲ್ಲಿ ಇರುವುದಾಗಿ ಹೇಳಿದ್ದಾರೆ.

Advertisement

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹಂಚಿಕೊಂಡಿರುವ ಕಮಲ್​ ಹಾಸನ್​, “ಚುನಾವಣಾ ಸೋಲು ನನ್ನನ್ನು ತಡೆಯುವುದಿಲ್ಲ. ನನ್ನ ಕೊನೆಯ ಉಸಿರಿರುವ ವರೆಗೂ ನಾನು ರಾಜಕೀಯದಲ್ಲಿ ಇರುತ್ತೇನೆ. ರಾಜಕೀಯ ಇರುವವರೆಗೂ ಮಕ್ಕಳ್​ ನೀಧಿ ಮೈಯಮ್ ಪಕ್ಷ ಇರುತ್ತದೆ. ಕೆಲವೇ ವ್ಯಕ್ತಿಗಳು ಪಕ್ಷವನ್ನು ತಮ್ಮ ಸ್ವಂತ ಲಾಭಕ್ಕಾಗಿ ಬಯಸಿದ್ದರು. ಆದರೆ ಇದು ಮರುಕಳಿಸುವುದಿಲ್ಲ. ಕಷ್ಟಪಟ್ಟು ದುಡಿಯುವ ಕಾರ್ಯಕರ್ತರ ಕೈಗಳು ಅಧಿಕಾರವನ್ನು ಪಡೆಯುತ್ತವೆ” ಎಂದಿದ್ದಾರೆ.

ಎಂಎನ್​ಎಂ ಪಕ್ಷದ ರೂಪಾಂತರದ ಆವೃತ್ತಿಯನ್ನು ನೀವು ನೋಡಲಿದ್ದೀರಿ. ಮೊದಲಿನಿಂದಲೂ ನಮ್ಮ ಸಿದ್ಧಾಂತದಲ್ಲಿ ಸ್ಪಷ್ಟತೆ ಮತ್ತು ನಮ್ಮ ಹಾದಿಯಲ್ಲಿ ಪ್ರಾಮಾಣಿಕತೆ ಇರುವುದರಿಂದ ನಮ್ಮ ಜರ್ನಿಯನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಕಮಲ್​ ಹಾಸನ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next