Advertisement

ಧರ್ಮಾಪುರ-ನಂದೂರ(ಕೆ) ಜಾತ್ರೆ ರದ್ದು

05:19 PM Apr 24, 2020 | Team Udayavani |

ಕಲಬುರಗಿ: ಕೋವಿಡ್ ತಡೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಏ.26 ರಂದು ನಡೆಯಲಿರುವ ತಾಲೂಕಿನ ಧರ್ಮಾಪುರದ ಶರಣಬಸವೇಶ್ವರ ದೇವಸ್ಥಾನದ ರಥೋತ್ಸವ, ಜಾತ್ರೆ ಹಾಗೂ ಏ. 28 ರಂದು ನಡೆಯಲಿರುವ ನಂದೂರ (ಕೆ) ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಅಗ್ಗಿ (ಅಗ್ನಿ) ತುಳಿಯುವ ಕಾರ್ಯಕ್ರಮ, ಜಾತ್ರೆ ರದ್ದುಪಡಿಸಲಾಗಿದೆ ಎಂದು ತಹಶೀಲ್ದಾರ್‌ ಮಲ್ಲೇಶ ತಂಗಾ ತಿಳಿಸಿದ್ದಾರೆ.

Advertisement

ತಹಶೀಲ್ದಾರ್‌ ಮಲ್ಲೇಶ ತಂಗಾ ಅವರ ನೇತೃತ್ವದಲ್ಲಿ ತಾಲೂಕಿನ ಧರ್ಮಾಪುರ ಗ್ರಾಮದ ಶರಣಬಸವೇಶ್ವರ ದೇವಸ್ಥಾನ ಸಮಿತಿ, ನಂದೂರ (ಕೆ) ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಸಮಿತಿ ಹಾಗೂ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಈ ಎರಡೂ ಜಾತ್ರೆಗಳನ್ನು ರದ್ದುಪಡಿಸುವ ಕುರಿತು ತೀರ್ಮಾನ ಕೈಗೊಳ್ಳಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next