Advertisement

ರಬಾಡ ಗಾಯಾಳು; ಭಾರತ ಪ್ರವಾಸಕ್ಕಿಲ್ಲ

12:15 AM Mar 01, 2020 | Sriram |

ಜೊಹಾನ್ಸ್‌ಬರ್ಗ್‌: ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಗಾಗಿ ಮಾರ್ಚ್‌ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿರುವ ದಕ್ಷಿಣ ಆಫ್ರಿಕಾಕ್ಕೆ ಭಾರೀ ಆಘಾತವೊಂದು ಎದುರಾಗಿದೆ.

Advertisement

ಪ್ರಮುಖ ವೇಗಿ ಕಾಗಿಸೊ ರಬಾಡ ಗಾಯಾಳಾಗಿ ಈ ಸರಣಿಯಿಂದ ಹೊರಗುಳಿಯಲಿದ್ದಾರೆ. ಅಷ್ಟೇ ಅಲ್ಲ, ಈಗ ನಡೆಯುತ್ತಿರುವ ಆಸ್ಟ್ರೇಲಿಯ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಿಂದಲೂ ಹೊರಬಿದ್ದಿದ್ದಾರೆ.

ಆಸ್ಟ್ರೇಲಿಯ ವಿರುದ್ಧದ ಅಂತಿಮ ಟಿ20 ಪಂದ್ಯದ ವೇಳೆ ರಬಾಡ ತೊಡೆಯ ಸ್ನಾಯು ಸೆಳೆತಕ್ಕೆ ಸಿಲುಕಿದ್ದು, ಮುಂದಿನ 4 ವಾರಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ ಎಂದು ತಂಡದ ವೈದ್ಯ ಶುಯೆಬ್‌ ಮಂಜ್ರಾ ಹೇಳಿದ್ದಾರೆ.

ಐಪಿಎಲ್‌ ವೇಳೆ ಅವರು ಕ್ರಿಕೆಟಿಗೆ ಮರಳುವ ಸಾಧ್ಯತೆ ಇದೆ. ರಬಾಡ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next