Advertisement

ಕದ್ರಿ ಗೋಪಾಲನಾಥ್ ಪುಣ್ಯಸ್ಮರಣೆ ; ಪತ್ನಿ ಆರೋಗ್ಯ ಏರುಪೇರು; ಡಿಸಿಯಿಂದಲೇ ಚಿಕಿತ್ಸೆ

08:56 PM Dec 06, 2021 | Team Udayavani |

ಬಂಟ್ವಾಳ : ಇಲ್ಲಿನ ಸಜೀಪದ ಮಿತ್ತಮಜಲಿನಲ್ಲಿ ಸೋಮವಾರ ಸಂಜೆ ನಡೆಯುತ್ತಿದ್ದ ಸ್ಯಾಕ್ಸೋಫೋನ್ ಮಾಂತ್ರಿಕ ಕಲೈ ಮಾಮಣಿ ಕದ್ರಿ ಗೋಪಾಲನಾಥ್ ಅವರ 2 ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಪತ್ನಿ ಸರೋಜಿನಿ ಅವರು  ಅಸ್ವಸ್ಥಗೊಂಡಿದ್ದು, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ .ಅವರು ಸ್ಥಳದಲ್ಲೇ ಚಿಕಿತ್ಸೆ ನೀಡಿ ತತ್ ಕ್ಷಣಕ್ಕೆ ನೆರವಾದರು.

Advertisement

ಆರೋಗ್ಯ ಏರು ಪೇರಾಗುತ್ತಿದ್ದಂತೆ ನೇರವಾದ ವೈದ್ಯರೂ ಆದ ಜಿಲ್ಲಾಧಿಕಾರಿಗಳು ಸ್ಥಳದಲ್ಲೇ ಚಿಕಿತ್ಸೆ ನೀಡಿ, ಇತರ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಜಿಲ್ಲಾ ಅರೋಗ್ಯ ಅಧಿಕಾರಿಗೂ ಮಾಹಿತಿ ನೀಡಿ ಸರೋಜಿನಿ ಅವರ ಬಿಪಿ, ಶುಗರ್ ಮತ್ತು ಇಸಿಜಿ ಮಾಡಿಸುವಂತೆ ಸೂಚಿಸಿದ್ದಾರೆ.

ಸಜೀಪದ ಮಿತ್ತಮಜಲು ಪದ್ಮಶ್ರೀ ಕದ್ರಿ ಗೋಪಾಲನಾಥ್ ಅವರ ಹುಟ್ಟೂರಾಗಿದೆ.

‘ಸಂಗೀತ ಸೌರಭ’ ಕಾರ್ಯಕ್ರಮ ಸಣ್ಣ ಆತಂಕದ ನಡುವೆಯೂ ಸಾಂಗವಾಗಿ  ಮುಂದುವರೆದಿದ್ದು,  ಸರೋಜಿನಿ ಅವರು ಸಣ್ಣ ಮಟ್ಟಿನ ಆರೋಗ್ಯ ಏರು ಪೇರಾಗುತ್ತಿದ್ದಂತೆ ಚೇತರಿಸಿಕೊಂಡಿದ್ದಾರೆ.

Advertisement

ವೈದ್ಯಕೀಯ ಚಿಕಿತ್ಸೆ ನೀಡಿದ ಜಿಲ್ಲಾಧಿಕಾರಿಗಳ ಸಹಾಕಾರಕ್ಕೆ ಕದ್ರಿ ಅವರ ಪುತ್ರ ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಅವರು ಧನ್ಯವಾದ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next