Advertisement

ಕಡಬ: ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಜಾಗದ ಗಡಿ ಗುರುತು

05:13 PM Dec 20, 2017 | Team Udayavani |

ಕಡಬ: ಇಲ್ಲಿನ ಅಂಬೇಡ್ಕರ್‌ ಭವನದ ಬಳಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಕಾದಿರಿಸಲಾಗಿರುವ 1.73 ಎಕ್ರೆ ಜಾಗವನ್ನು ಕಡಬ ತಹಶೀಲ್ದಾರ್‌ ಜಾನ್‌ಪ್ರಕಾಶ್‌ ರೋಡ್ರಿಗಸ್‌ ಅವರ ನೇತೃತ್ವದಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಭೂ ಮಾಪನ ಇಲಾಖಾಧಿಕಾರಿಗಳು ಗಡಿ ಗುರುತು ಮಾಡುವ ಕಾರ್ಯ ನೆರವೇರಿಸಿದರು.

Advertisement

ಈ ಸಂದರ್ಭ ಉಪಸ್ಥಿತರಿದ್ದ ಕಡಬ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್‌ ಅವರು ಮಾತನಾಡಿ, ಮುಂದಿನ ಜ. 1ರಿಂದ ಕಡಬ ತಾ| ಅನುಷ್ಠಾನಗೊಳ್ಳಲಿದೆ. ತಾ| ಮಟ್ಟದ ಹೆಚ್ಚಿನ ಕಚೇರಿಗಳು ಆ ವೇಳೆ ಕಾರ್ಯಾರಂಭ ಮಾಡಲಿವೆ. ಬಸ್‌ ನಿಲ್ದಾಣದ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಆರಂಭಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಒತ್ತಡ ತರಲಾಗುವುದು. ಕಾದಿರಿಸಿದ ಸ್ಥಳದಲ್ಲಿ ಮುಂದಿನ 1 ತಿಂಗಳೊಳಗಾಗಿ ಬಸ್‌ ನಿಲ್ದಾಣದ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಲಿದೆ ಎಂದರು.

ತಾ. ಪಂ.ಸದಸ್ಯ ಫಝಲ್‌ ಕೋಡಿಂಬಾಳ, ಗ್ರಾ.ಪಂ.ಅಧ್ಯಕ್ಷ ಬಾಬು ಮುಗೇರ, ಸದಸ್ಯರಾದ ಅಶ್ರಫ್‌ ಶೇಡಿಗುಂಡಿ, ಶರೀಫ್‌ ಎ.ಎಸ್‌., ಶಾಲಿನಿ ಸತೀಶ್‌ ನಾೖಕ್‌, ಪ್ರಮುಖರಾದ ಸತೀಶ್‌ ನಾ„ಕ್‌ ಮೇಲಿನಮನೆ, ಶಿವರಾಮ ಎಂ.ಎಸ್‌., ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಭೂಮಾಪಕ ನವೀನ್‌ ಹಾಗೂ ಸಿಬಂದಿಗಳು ಈ ಸಂದರ್ಭ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next