Advertisement
ಕತ್ವಾಡಿಪುರದ ಶಿವಣ್ಣ ಮಾತನಾಡಿ, ಕಬಿನಿ ಅಚ್ಚುಕಟ್ಟಿನ ಪ್ರದೇಶದ ಕೃಷಿಕರಾದ ನಾವೆಲ್ಲ, ಈ ಸಾಲಿನ ನೆರೆ ಹಾವಳಿಯಿಂದಾಗಿ ಸಾಕಷ್ಟು ಹಾನಿ ಅನುಭವಿಸಿದ್ದೇವೆ. ಜಲಾಶಯದಲ್ಲೂ ಸಾಕಷ್ಟು ನೀರಿದೆ. ಹೀಗಾಗಿ ಬೇಸಿಗೆ ಬೆಳೆಗೆ ನೀರು ಕೊಡಬೇಕು ಎಂದು ಆಗ್ರಹಿಸಿದರು.
Related Articles
Advertisement
ದೀನದಯಾಳ ಯೋಜನೆಯಡಿಯಲ್ಲಿ ರೈತರಿಗೆ ನೀಡಲಾಗುವ ವಿದ್ಯುತ್ಗೆ ಲಂಚ ಎಷ್ಟು ಬಹಿರಂಗ ಪಡಿಸಿ ಎಂಬ ಪ್ರಶ್ನೆ ಎದುರಾದಾಗ ಕೆಪಿಟಿಸಿಎಲ್ ಅಧಿಕಾರಿ ದೇವಾರಾಜ ಕಕ್ಕಾ ಬಿಕ್ಕಿಯಾದರು. ಒಂದು ಟೀಸಿಗಾಗಿ ವಿದ್ಯುತ್ ಗುತ್ತಿಗೆದಾರರು 1.5 ಲಕ್ಷ ಲಂಚ ಕೇಳಿದರೆ, ಇದು ರೈತರ ಶೋಷಣೆಯೋ ಅಭಿವೃದ್ಧಿಯೋ ಎಂದಾಗ ಉತ್ತರಿಸಲು ತಡವರಿಸಿದ ಅಧಿಕಾರಿ, ಟೀಸಿ ಸಂರ್ಪಕ ಪೂರ್ಣ ಉಚಿತ. ಆದರೆ ಕಾಮಗಾರಿ ಪೂರ್ಣಗೊಂಡಿದೇ ಎಂಬ ಲಿಖೀತ ಪತ್ರ ಗುತ್ತಿಗೆದಾರರಿಂದ ಬೇಕು ಎಂದು ಹೇಳಿದರು. ಅದಕ್ಕೆ ರೈತರು, ಲಂಚ! ಎಂದು ಅಣಕವಾಡಿದರು.
ತಾಲೂಕಿನಲ್ಲಿ ಎಗ್ಗಿಲ್ಲದೆ ಮದ್ಯ ಮಾರಾಟವಾಗುತ್ತಿದ್ದು, ತಿಳಿಸಿದರೂ ನೆಪ ಮಾತ್ರಕ್ಕೆ ದಾಳಿ ನಡೆಸಿ, ಮತ್ತೆ ಪುಸಲಾಯಿಸಿ ಕಳುಹಿಸುತ್ತೀರಿ. ಇದರಿಂದ ಕುಟುಂಬ ಹಾಗೂ ಗ್ರಾಮದ ಸೌಹರ್ದಕ್ಕೆ ಭಂಗ ಬರುತ್ತಿದೆ ಎಂದು ಅಬಕಾರಿ ಅಧಿಕಾರಿ ಪದ್ಮಾವತಿಯವರ ಬೇವರಿಳಿಸಿದರು. ಸಭೆಗೆ ಹಾಜರಾಗಲು ತಾಲೂಕಿನ 38 ಇಲಾಖೆಗಳಿಗೆ ತಿಳಿಸಲಾಗಿತ್ತು. ಆದರೆ ಕಂದಾಯ, ಶಿಕ್ಷಣ, ಅಬಕಾರಿ, ಕೆಪಿಟಿಸಿಎಲ್ ಸೇರಿದಂತೆ ಕೇವಲ 12 ಇಲಾಖೆಗಳ ಪ್ರತಿನಿಧಿಗಳು ಮಾತ್ರ ಹಾಜರಿದ್ದು, ಉಳಿದ ಇಲಾಖೆಗಳು ರೈತರಿಗೂ ತಮಗೂ ಸಂಭಂದವಿಲ್ಲಾ ಎಂದು ದೂರ ಉಳಿದವು. ಅಧಿಕಾರಿಗಳ ಗೈರಿಗೆ ರೈತರ ಅಸಮಾಧಾನ ವ್ಯಕ್ತವಾಯಿತು.
ತಾಲೂಕಿನ ರೈತರ ನೂರಾರು ಸಮಸ್ಯೆಗಳು ಸಭೆಯಲ್ಲಿ ಮಾರ್ಧನಿಸಿದಾಗ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ ಮಹೇಶ ಕುಮಾರ ಇಂದಿನ ಸಮಸ್ಯೆಗಳಿಗೆ ಆಯಾ ಇಲಾಖೆಯಿಂದ ಪರಿಹಾರ ಅಥವಾ ಕಾರಣ ತಿಳಿಸಲಾಗುತ್ತದೆ ಎಂದರು. ರೈತ ಸಂಘಟನೆಗಳ ಮುಖ್ಯಸ್ಥ ಶಿರಮಳ್ಳಿ ಸಿದ್ದಪ್ಪ, ಬೊಕ್ಕಳ್ಳಿ ನಂಜುಂಡಸ್ವಾಮಿ, ಇಮ್ಮಾವು ರಘು, ಹೆಜ್ಜಿಗೆ ಪ್ರಕಾಶ, ದೇವನೂರು ಶಿವಕುಮಾರ, ಸಿಂಧುವಳ್ಳಿ ಬಸವಣ್ಣ, ಗೊದ್ದನಪುರದ ಸುರೇಶ ಸೇರಿದಂತೆ 150ಕ್ಕೂ ಹೆಚ್ಚು ರೈತ ನಾಯಕರು ಉಪಸ್ಥಿತರಿದ್ದರು.