Advertisement

ರಾಜ್ಯಾಧ್ಯಕ್ಷ ಸ್ಥಾನ ಮುಂದುವರಿಕೆ ರಾಷ್ಟ್ರೀಯ ನಾಯಕರ ನಿರ್ಧಾರ: ಈಶ್ವರಪ್ಪ

12:29 PM Aug 28, 2022 | Team Udayavani |

ಶಿವಮೊಗ್ಗ: ಕಟೀಲು ರಾಜ್ಯಾಧ್ಯಕ್ಷ ಸ್ಥಾನ ಮುಂದುವರಿಕೆ ಕುರಿತು ರಾಷ್ಟ್ರೀಯ  ನಾಯಕರು ನಿರ್ಧಾರ ಮಾಡುತ್ತಾರೆ. ನಮ್ಮ ರಾಜ್ಯದ ಅಧ್ಯಕ್ಷರು ಯಾರು ಇರಬೇಕು, ಯಾರು ಇರಬಾರದು ಎನ್ನುವ ತೀರ್ಮಾನ ಅವರು ಮಾಡುತ್ತಾರೆ. ಅವರು ಏನು ತೀರ್ಮಾನ  ಮಾಡುತ್ತಾರೆ ಅದಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.

Advertisement

ಶಿವಮೊಗ್ಗದಲ್ಲಿ ಮಾತಾನಾಡಿದ ಅವರು, ಬಿಎಸ್ ವೈ ದೆಹಲಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಬಿಎಸ್ ವೈ ಅವರಿಗೆ ಈಗಾಗಲೇ  ಕೇಂದ್ರ ನಾಯಕರು ವಿಶೇಷ  ಸ್ಥಾನಮಾನ ಪಕ್ಷದಲ್ಲಿ ನೀಡಿದ್ದಾರೆ. ಇದು ಇಡೀ ರಾಜ್ಯದ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರಿಗೆ ಸಂತೋಷ ಆಗಿದೆ. ಚುನಾವಣೆ ಬಂದ ಸಂದರ್ಭದಲ್ಲಿ  ಬಿಎಸ್ ವೈ ಸ್ಪಷ್ಟವಾಗಿ ಹೇಳಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಬಿಎಸ್ ವೈ ಬಿಜೆಪಿ ಕನಿಷ್ಟ 150 ಸ್ಥಾನ ಗೆಲ್ಲುವ ಗುರಿ ಹೊಂದಿದ್ದಾರೆ. ಬಿಎಸ್ ವೈ ಆಸೆ ಈಡೇರುತ್ತದೆ ಎನ್ನುವ ವಿಶ್ವಾಸ ನನಗೆ ಇದೆ ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next