Advertisement

ಕೆ.ಎಲ್‌. ರಾಹುಲ್‌ ತಾತ್ಕಾಲಿಕ ಕೀಪರ್‌: ಪಾರ್ಥಿವ್‌ ಪಟೇಲ್‌

02:12 AM May 21, 2020 | Sriram |

ಹೊಸದಿಲ್ಲಿ: ಟೀಮ್‌ ಇಂಡಿಯಾದ ವಿಕೆಟ್‌ ಕೀಪಿಂಗ್‌ ಜವಾಬ್ದಾರಿಗೆ ಕೆ.ಎಲ್‌. ರಾಹುಲ್‌ ಕೇವಲ ತಾತ್ಕಾಲಿಕ ಪರಿಹಾರವಷ್ಟೇ ಎಂದು ಪಾರ್ಥಿವ್‌ ಪಟೇಲ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ರಾಹುಲ್‌ ಕೀಪಿಂಗ್‌ ಜವಾಬ್ದಾರಿ ಅತ್ಯುತ್ತಮವಾಗಿ ನಿಭಾಯಿಸಬಲ್ಲರು. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ರಿಷಭ್‌ ಪಂತ್‌ ಅವರಲ್ಲಿ ದೀರ್ಘ‌ ಅವಧಿಗೆ ಕೀಪಿಂಗ್‌ ಸೇವೆ ನೀಡುವ ಸಾಮರ್ಥ್ಯವಿದೆ. ಪಂತ್‌ ಅವರನ್ನು ಭೇಟಿಯಾದಾಗಲೆಲ್ಲ ಅವರ ಬಳಿ ಇದನ್ನೇ ಹೇಳಿದ್ದೇನೆ. ನಿನ್ನ ಬಳಿ ಪ್ರತಿಭೆ ಇರುವ ಸಲುವಾಗಿಯೇ ಜನರು ಮಾತನಾಡುತ್ತಿದ್ದಾರೆ. ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಕೆಲವೊಮ್ಮೆ ಕಳೆದು ಹೋಗಿರುವ ಲಯವನ್ನು ಮರಳಿ ಪಡೆಯಲು ದೇಶಿ ಟೂರ್ನಿ ಗಳಲ್ಲಿ ಆಡಬೇಕು. ನಿನ್ನ ಜಾಗದಲ್ಲಿ ನಾನಿದ್ದರೂ ಕೂಡ ಒಂದೆರಡು ವರ್ಷ ದೇಶಿ ಕ್ರಿಕೆಟ್‌ ಆಡಿ ಲಯಕ್ಕೆ ಮರಳುತ್ತಿದ್ದೆ ಎಂದು ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ಪಾರ್ಥಿವ್‌ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next