Advertisement

ಮುಂದುವರೆದ ಕೆಜಿಎಫ್-2 ವಿಜಯ ಯಾತ್ರೆ

02:26 PM Apr 20, 2022 | Team Udayavani |

ಕಳೆದ ವಾರ ತೆರೆಕಂಡ ಬಹುನಿರೀಕ್ಷಿತ “ಕೆಜಿಎಫ್-2′ ಸಿನಿಮಾ, ನಿರೀಕ್ಷೆಯಂತೆ ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನು ಬರೆಯುತ್ತ ಮುನ್ನುಗ್ಗುತ್ತಿದೆ.

Advertisement

ಇನ್ನು ಈ ವಾರವೂ ರಾಜ್ಯಾದ್ಯಂತ ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ ಮತ್ತು ಮಲ್ಟಿಫ್ಲೆಕ್ಸ್‌ಗಳಲ್ಲಿ ರಾಕಿ ಭಾಯ್‌ ಹವಾ ಜೋರಾಗಿರುವುದರಿಂದ, ಬಿಡುಗಡೆಗೆ ಸಿದ್ಧವಾಗಿದ್ದ ಬಹುತೇಕ ಹೊಸಬರ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಮತ್ತೆ ಒಂದೆರಡು ವಾರ ಮುಂದಕ್ಕೆ ಹಾಕಿಕೊಂಡಿವೆ.

ಸದ್ಯದ ಮಟ್ಟಿಗೆ ಈ ವಾರ ಏಕೈಕ ಸಿನಿಮಾ “ಗಂಡುಲಿ’ ಮಾತ್ರ ಬಿಡುಗಡೆಯಾಗುತ್ತಿದೆ. “ಕೆಜಿಎಫ್-2′ ಅಬ್ಬರದ ನಡುವೆಯೇ ಯುವನಟ ವಿನಯ್‌ ರತ್ನಸಿದ್ಧಿ ನಿರ್ದೇಶಿಸಿ, ನಾಯಕ ನಟನಾಗಿ ಅಭಿನಯಿಸಿರುವ “ಗಂಡುಲಿ’ ಮಾತ್ರ ಈ ವಾರ ತನ್ನ ಬಿಡುಗಡೆಯನ್ನು ಘೋಷಿಸಿಕೊಂಡಿದೆ.

ಈಗಾಗಲೇ ಚಿತ್ರದ ಪ್ರಚಾರ ಕಾರ್ಯ ನಡೆಸುತ್ತಿರುವ “ಗಂಡುಲಿ’ ಚಿತ್ರತಂಡ ರಾಜ್ಯಾದ್ಯಂತ ಸುಮಾರು 100ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಚಿತ್ರವನ್ನು ತೆರೆಗೆ ತರಲು ಪ್ಲಾನ್‌ ಮಾಡಿಕೊಂಡಿದೆ. “ಗಂಡುಲಿ’ ಬಿಡುಗಡೆಯ ಬಗ್ಗೆ ಮಾತನಾಡುವ ನಟ ಕಂ ನಿರ್ದೇಶಕ ವಿನಯ್‌ ರತ್ನಸಿದ್ಧಿ, “ಸಿನಿಮಾದ ಟೈಟಲ್ಲೇ ಹೇಳುವಂತೆ, “ಗಂಡುಲಿ’ ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌ ಮತ್ತು ಫ್ಯಾಮಿಲಿ ಕಂಟೆಂಟ್‌ ಸಿನಿಮಾ. ಈಗಾಗಲೇ ಬಿಡುಗಡೆಯಾಗಿರುವ “ಗಂಡುಲಿ’ ಸಿನಿಮಾದ ಟ್ರೇಲರ್‌ ಮತ್ತು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಏ.24ರಂದು ಯುದ್ಧಕ್ಕೆ ಮುನ್ನುಡಿ ಬರೆಯಲಿದ್ದಾರೆ ಧ್ರುವ, ಪ್ರೇಮ್‌

Advertisement

ಸಿನಿಮಾದ ಡಬ್ಬಿಂಗ್‌ ರೈಟ್ಸ್‌ ಕೂಡ ಒಳ್ಳೆಯ ಮೊತ್ತಕ್ಕೆ ಸೇಲ್‌ ಆಗಿದೆ. ಸಿನಿಮಾದ ಕಂಟೆಂಟ್‌ ಕೂಡ ತುಂಬ ಚೆನ್ನಾಗಿರುವುದರಿಂದ, ವಿತರಕರು ಮತ್ತು ಪ್ರದರ್ಶಕರಿಂದಲೂ ಸಿನಿಮಾಕ್ಕೆ ಒಳ್ಳೆಯ ಬೇಡಿಕೆ ಬರುತ್ತಿದೆ. ಹೀಗಾಗಿ ಈ ವಾರ ಸುಮಾರು 100ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ “ಗಂಡುಲಿ’ ಬಿಡುಗಡೆ ಮಾಡಲು ಮುಂದಾಗಿದ್ದೇವೆ’ ಎನ್ನುತ್ತಾರೆ.

“ಗಂಡುಲಿ’ ಚಿತ್ರದಲ್ಲಿ ವಿನಯ್‌ ರತ್ನಸಿದ್ಧಿ ಅವರಿಗೆ ಛಾಯಾದೇವಿ ನಾಯಕಿಯಾಗಿ ಜೋಡಿಯಾಗಿದ್ದು, ಉಳಿದಂತೆ ಸುಧಾ ನರಸಿಂಹರಾಜು, ಧರ್ಮೇಂದ್ರ ಅರಸ್‌, ಶಿವಮೊಗ್ಗ ರಾಮಣ್ಣ, ಸುಬ್ಬೆಗೌಡ್ರು, ಶಿವು, ವಿಜಯ್, ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಒಟ್ಟಾರೆ “ಕೆಜಿಎಫ್-2′ ಅಬ್ಬರದ ನಡುವೆಯೇ ಬಿಡುಗಡೆಯಾಗುತ್ತಿರುವ ಏಕೈಕ ಸಿನಿಮಾ “ಗಂಡುಲಿ’ ಬಾಕ್ಸಾಫೀಸ್‌ನಲ್ಲಿ ಹೇಗೆ ಘರ್ಜಿಸಲಿದೆ ಅನ್ನೋದು ಈ ವಾರಾಂತ್ಯದಲ್ಲಿ ಗೊತ್ತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next