Advertisement

ಸಿಎಂ ಆಗುವುದಕ್ಕಾಗಿ ಈಶ್ವರಪ್ಪ ಹೀಗೆಲ್ಲಾ ಮಾಡುತ್ತಿದ್ದಾರೆ- ಕೆ.ಬಿ.ಪ್ರಸನ್ನಕುಮಾರ್

05:07 PM Apr 02, 2021 | Team Udayavani |

ಶಿವಮೊಗ್ಗ: ಮೊನ್ನೆಯಿಂದ ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ಬರೆದಿರುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಮುಂಬರುವ 2023 ರ ಚುನಾವಣೆಯಲ್ಲಿ  ಹೇಗೂ ತನಗೆ ಟಿಕೆಟ್ ಸಿಗುವುದಿಲ್ಲ ಎನ್ನುವುದು ಈಶ್ವರಪ್ಪ ಅವರಿಗೆ ಗೊತ್ತಾಗಿದೆ. ಹಾಗಾಗಿ ಈ ಅವಧಿಯಲ್ಲಿಯೇ ಸಿಎಂ ಆಗುವುದಕ್ಕಾಗಿ ಈಶ್ವರಪ್ಪ ಪ್ರಯತ್ನ ಮಾಡುತ್ತಿದ್ದಾರೆ. 6 ತಿಂಗಳಾದರೂ ಸಿಎಂ ಆಗಬೇಕಾದರೆ ಈಗ ಇರೋರು ಹೋಗಬೇಕು. ಈ ಬದಲಾವಣೆಗೆ ಕಾರಣ ಬೇಕಿದೆ ಇದಕ್ಕಾಗಿಯೇ ರಾಜ್ಯ ಸರ್ಕಾರದ ಅವ್ಯವಹಾರಗಳನ್ನು ಹೊರ ಹೇಳುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಹೇಳಿಕೆ ನೀಡಿದ್ದಾರೆ.

Advertisement

ಶಿವಮೊಗ್ಗದಲ್ಲಿ ಮಾಧ‍್ಯಮದವರೊಂದಿಗೆ ಮಾತನಾಡಿರುವ ಅವರು 2018 ರ ಚುನಾವಣೆಯಲ್ಲಿ ಈಶ್ವರಪ್ಪ ಶಿವಮೊಗ್ಗದಲ್ಲಿ ಹೋರಾಡಿ ಕೊನೆಯದಾಗಿ ಟಿಕೆಟ್ ತಗೆದುಕೊಂಡಿದ್ದರು. ನನ್ನ ಟಿಕೆಟ್ ಹಾರಿಸಿಯೇ ಬಿಟ್ಟಿದ್ದರೂ ಎಂದು ಸ್ವತಃ ಈಶ್ವರಪ್ಪನವರೇ ಒಮ್ಮೆ ಹೇಳಿದ್ದರು. ಚುನಾವಣೆ ಮುಗಿದಾಗ ಏನೇನೊ ಮಾಡಿ ಟಿಕೆಟ್ ತಂದೆ ಅಂದಿದ್ದರು. ಅಂದು ಈಶ್ವರಪ್ಪರ ಟಿಕೆಟ್ ಗೆ ಅಡ್ಡಿಯಾಗಿದ್ದು ಯಡಿಯೂರಪ್ಪನವರು ಎಂದಿದ್ದಾರೆ.

ಇದನ್ನೂ ಓದಿ:ಅರ್ಜಿ ಸಲ್ಲಿಸಿ 2 ತಿಂಗಳಾದ್ರೂ ಇನ್ನೂ ದೊರೆತಿಲ್ಲ ಪಡಿತರ ಚೀಟಿ

ಇದೀಗ ಕೇವಲ ಅವರ ಇಲಾಖೆಯದ್ದಲ್ಲ. ಇಡೀ ಸರ್ಕಾರದ ಅವ್ಯವಹಾರದ ಬಗ್ಗೆ ಅವರು ಮಾತನಾಡಿದ್ದಾರೆ. ಇದು ಸುಳ್ಳಾಗಿದ್ದರೆ ಸಚಿವ ಈಶ್ವರಪ್ಪ ಅವರ ಮೇಲೆ  ಕ್ರಮ ಕೈಗೊಳ್ಳಬೇಕು. ಸತ್ಯವಾಗಿದ್ದರೆ ಸಿಎಂ ರಾಜೀನಾಮೆ ಕೊಡಬೇಕು.  ಆಮೇಲೆ ಬೇಕಿದ್ದರೇ ಬಿಜೆಪಿ ಹೈಕಮಾಂಡ್ ಈಶ್ವರಪ್ಪ ಅವರನ್ನೇ ಸಿಎಂ ಮಾಡಲಿ ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next