Advertisement

ರಾಜಸ್ಥಾನ,ಮಧ್ಯಪ್ರದೇಶದಲ್ಲಿ ಕೈ, ಬಿಜೆಪಿಗೆ ಜಯ

02:51 AM Jun 20, 2020 | Hari Prasad |

ಹೊಸದಿಲ್ಲಿ: ರೆಸಾರ್ಟ್‌ ರಾಜಕೀಯ, ರಾಜೀನಾಮೆಗಳು, ಪಕ್ಷಾಂತರ ಮತ್ತು ಲಂಚದ ಆರೋಪಗಳ ನಡುವೆಯೇ ಶುಕ್ರವಾರ 8 ರಾಜ್ಯಗಳ 19 ಸ್ಥಾನಗಳಿಗೆ ನಡೆದ ಚುನಾವಣೆಯ ಫ‌ಲಿತಾಂಶ ಹೊರಬಿದ್ದಿದೆ.

Advertisement

ಗುಜರಾತ್‌ನಲ್ಲಿ ಮತ ಎಣಿಕೆ ವೇಳೆ ಗೊಂದಲ ಉಂಟಾದ ಕಾರಣ, ಮತ ಎಣಿಕೆಯನ್ನು ವಿಳಂಬ ಮಾಡಲಾಗಿದೆ.

ಇನ್ನುಳಿದ 7 ರಾಜ್ಯಗಳ 15 ಸ್ಥಾನಗಳ ಪೈಕಿ ಬಿಜೆಪಿ 5, ಕಾಂಗ್ರೆಸ್‌ 3, ವೈಎಸ್ಸಾರ್‌ ಕಾಂಗ್ರೆಸ್‌ 4 ಸ್ಥಾನಗಳನ್ನು ಬಾಚಿಕೊಂಡಿವೆ.

ಮಿಜೋರಾಂ ಮತ್ತು ಮೇಘಾಲಯದಲ್ಲಿ ಪ್ರಾದೇಶಿಕ ಪಕ್ಷಗಳು ಗೆಲುವು ಸಾಧಿಸಿವೆ. ಜಾರ್ಖಂಡ್‌ನ‌ಲ್ಲಿ ಒಂದು ಸ್ಥಾನವನ್ನು ಆಡಳಿತಾರೂಢ ಜೆಎಂಎಂ ಪಡೆದುಕೊಂಡಿದೆ.

ರಾಜಸ್ಥಾನದಲ್ಲಿ ಕೈಗೆ 2, ಬಿಜೆಪಿಗೆ 1: ರಾಜಸ್ಥಾನದಲ್ಲಿ 3 ಸೀಟುಗಳ ಪೈಕಿ ಎರಡು ಕಾಂಗ್ರೆಸ್‌ ಹಾಗೂ ಒಂದು ಬಿಜೆಪಿ ಪಾಲಾಗಿದೆ. ಕಾಂಗ್ರೆಸ್‌ನಿಂದ ಕೆ.ಸಿ.ವೇಣುಗೋಪಾಲ್‌ ಮತ್ತು ನೀರಜ್‌ ಡಾಂಗಿ, ಬಿಜೆಪಿಯಿಂದ ರಾಜೇಂದ್ರ ಗೆಹ್ಲೊಟ್‌ ಯಾವುದೇ ಅಡ್ಡ ಮತದಾನವಿಲ್ಲದೇ ರಾಜ್ಯಸಭೆಗೆ ಪ್ರವೇಶ ಪಡೆದಿದ್ದಾರೆ. ಈ ಮೂಲಕ ರಾಜ್ಯಸಭೆಗೆ ಈವರೆಗೆ ರಾಜಸ್ಥಾನದಿಂದ ಮೂವರು ಆಯ್ಕೆಯಾದಂತಾಗಿದ್ದು, ಬಿಜೆಪಿಯ ಸಂಖ್ಯಾಬಲ 7ಕ್ಕೇರಿದೆ.

Advertisement

ಸಿಂದಿಯಾ, ದಿಗ್ವಿಜಯ್‌ ಮೇಲ್ಮನೆಗೆ: ಮಧ್ಯಪ್ರದೇಶದಲ್ಲಿ ನಿರೀಕ್ಷೆಯಂತೆ ಬಿಜೆಪಿಯಿಂದ ಜ್ಯೋತಿರಾದಿತ್ಯ ಸಿಂದಿಯಾ, ಸುಮೇರ್‌ ಸಿಂಗ್‌ ಸೋಲಂಕಿ, ಕಾಂಗ್ರೆಸ್‌ನಿಂದ ಹಿರಿಯ ನಾಯಕ ದಿಗ್ವಿಜಯ ಸಿಂಗ್‌ ಮೇಲ್ಮನೆಗೆ ಎಂಟ್ರಿ ಪಡೆದಿದ್ದಾರೆ. ಕಾಂಗ್ರೆಸ್‌ನ ಮತ್ತೊಬ್ಬ ಅಭ್ಯರ್ಥಿ, ದಲಿತ ನಾಯಕ ಫ‌ೂಲ್‌ ಸಿಂಗ್‌ ಬರಿಯಾ ಸೋಲುಂಡಿದ್ದಾರೆ.

ಇದೇ ವೇಳೆ, ಸಮಾಜವಾದಿ ಪಕ್ಷದ ಶಾಸಕ ರಾಜೇಶ್‌ ಶುಕ್ಲಾ ಅವರು ಬಿಜೆಪಿ ಪರ ಮತ ಚಲಾಯಿಸಿದ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಇದೇ ವೇಳೆ, ಬಿಜೆಪಿಯ ಇಬ್ಬರು ಶಾಸಕರು ಅಡ್ಡಮತದಾನ ಮಾಡಿರುವ ಆರೋಪ ಎದುರಿಸಿದ್ದಾರೆ.

ಆಂಧ್ರದಲ್ಲಿ ಕ್ಲೀನ್‌ಸ್ವೀಪ್‌: ನಿರೀಕ್ಷೆಯಂತೆಯೇ ಎಲ್ಲ ನಾಲ್ಕು ಸ್ಥಾನಗಳನ್ನೂ ಆಡಳಿತಾರೂಢ ವೈಎಸ್ಸಾರ್‌ ಕಾಂಗ್ರೆಸ್‌ ಬಾಚಿಕೊಂಡಿದೆ.

ಉಳಿದೆಡೆ ಏನಾಯ್ತು?:  ಜಾರ್ಖಂಡ್‌ನ‌ 2 ರಾಜ್ಯಸಭಾ ಸ್ಥಾನಗಳಲ್ಲಿ ಒಂದನ್ನು ಬಿಜೆಪಿಯ ದೀಪಕ್‌ ಪ್ರಕಾಶ್‌, ಮತ್ತೊಂದನ್ನು ಆಡಳಿತಾರೂಢ ಜೆಎಂಎಂ ಸ್ಥಾಪಕ, ಮಾಜಿ ಸಿಎಂ ಶಿಬು ಸೊರೇನ್‌ ತಮ್ಮದಾಗಿಸಿಕೊಂಡಿದ್ದಾರೆ. ಮೇಘಾಲಯದಲ್ಲಿ ಆಡಳಿತಾರೂಢ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ, ಮಣಿಪುರದಲ್ಲಿ ಬಿಜೆಪಿ ಗೆದ್ದಿದೆ. ಜೋರಾಂನಲ್ಲಿ ಪ್ರಾದೇಶಿಕ ಪಕ್ಷದ ಅಭ್ಯರ್ಥಿ ಗೆದ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next