Advertisement

ಒಳ್ಳೆ ಮುಹೂರ್ತ ನೋಡಿ ಕಾಂಗ್ರೆಸ್‌ ಸೇರುವೆ

06:50 AM Oct 06, 2018 | Team Udayavani |

ಮೈಸೂರು: ಒಳ್ಳೆ ಮುಹೂರ್ತ ನೋಡಿ ಕಾಂಗ್ರೆಸ್‌ ಸೇರುವುದಾಗಿ ಕೆಪಿಜೆಪಿ ಸದಸ್ಯ, ಅರಣ್ಯ ಸಚಿವ ಆರ್‌.ಶಂಕರ್‌ ತಿಳಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, “ನಾನು ಕಾಂಗ್ರೆಸ್‌ ಸೇರಬೇಕೆಂದು ಹಿರಿಯ ನಾಯಕರು ಹೇಳಿದ್ದಾರೆ.

Advertisement

ಅವರ ಮಾತಿನಂತೆ ಒಳ್ಳೆಯ ಮುಹೂರ್ತ ನೋಡಿ ಪಕ್ಷದ ಸದಸ್ಯತ್ವ ಪಡೆಯುತ್ತೇನೆ.ಸಂಪುಟ ವಿಸ್ತರಣೆಯಾದರೂ ನಾನು ಸಚಿವನಾಗಿ ಮುಂದುವರಿಯುವೆ’ ಎಂದರು.

ಸಚಿವ ಡಿ.ಕೆ.ಶಿವಕುಮಾರ್‌ ಅವರ ನಿವಾಸದಲ್ಲಿ ಎಲ್ಲರೂ ಉಪಾಹಾರಕ್ಕೆ ಸೇರಿದ್ದಾಗ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಆಗಿಲ್ಲ. ಮುಂಬರುವ ಲೋಕಸಭಾ ಚುನಾವಣೆ ಎದುರಿಸುವ ಬಗ್ಗೆ ಮಾತ್ರ ಚರ್ಚೆ ನಡೆಯಿತು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next