Advertisement

JK Cabinet Meet: ಕಾಶ್ಮೀರಕ್ಕೆ ರಾಜ್ಯ ಸ್ಥಾನ ಕೊಡಿ: ಸಿಎಂ ಒಮರ್‌ ಸಂಪುಟ ಸಭೆ ನಿರ್ಣಯ

03:03 AM Oct 19, 2024 | Team Udayavani |

ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮತ್ತೆ ನೀಡಬೇಕು ಎಂಬ ಬಗ್ಗೆ ನಿರ್ಣಯವನ್ನು ಸಿಎಂ ಒಮರ್‌ ಅಬ್ದುಲ್ಲಾ ನೇತೃತ್ವದಲ್ಲಿ ನಡೆದ ಮೊದಲ ಸಂಪುಟ ಸಭೆಯಲ್ಲಿ ಅಂಗೀಕರಿಸಲಾಗಿದೆ.

Advertisement

ಶೀಘ್ರದಲ್ಲಿಯೇ ಹೊಸದಿಲ್ಲಿಗೆ ತೆರಳುವ ಮುಖ್ಯಮಂತ್ರಿ ಪ್ರಧಾನಿ ಮೋದಿಗೆ ನಿರ್ಣಯವನ್ನು ಸಲ್ಲಿಸಿ, ರಾಜ್ಯ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಲಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಮೊದಲು ಒಮರ್‌, ರಾಜ್ಯ ಸ್ಥಾನಮಾನ ಪುನರ್‌ ಸ್ಥಾಪಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದಿದ್ದರು.

ಆದರೆ ಒಮರ್‌ ಸಂಪುಟದ ನಿರ್ಣಯವನ್ನು ಪಿಡಿಪಿ ಪ್ರಶ್ನಿಸಿದೆ. ರಾಜ್ಯ ಸ್ಥಾನಮಾನ ಮರುಸ್ಥಾಪಿಸಲು ಕೋರಿ, 370ನೇ ವಿಧಿ ಮರುಸ್ಥಾಪನೆ ಬಗ್ಗೆ ಒಮರ್‌ ಸರಕಾರ ಮೌನ ತಾಳಿದೆ. ಇದು 2019ರ ಕೇಂದ್ರದ ನಿರ್ಧಾರಕ್ಕೆ ತಲೆದೂಗಿದಂತಾಗಿದೆ ಎಂದು ಟೀಕಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next