Advertisement

ರಾಮನ ಭೂಮಿಗೆ ಕನ್ನ: ಅರ್ಚಕನ ವಿರುದ್ಧ ಕೇಸು

07:20 AM Aug 14, 2017 | Team Udayavani |

ರಾಂಚಿ: ಭೂಮಾಫಿಯಾ ಜತೆ ಸೇರಿ ಶ್ರೀರಾಮನ ಹೆಸರಿನಲ್ಲಿ ಇದ್ದ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದ ದೇವಾಲಯದ ಅರ್ಚಕ ಹಾಗೂ ಸಹಚರನ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. 

Advertisement

ಝಾರ್ಖಂಡ್‌ನ‌ ರಾಂಚಿಯ ರಾಮ್‌ ಜಾನಕಿ ತಪೋವನ್‌ ಮಂದಿರದ ಅರ್ಚಕ ರಾಮ್‌ ಶರಣ್‌ ದಾಸ್‌, ಸರಕಾರಿ ಅಧಿಕಾರಿಗಳು, ಬಿಲ್ಡರ್‌ಗಳು ಹಾಗೂ ಭೂಮಾಫಿಯಾದ ಶಕ್ತಿಗಳ ವಿರುದ್ಧ ದೇವಾಲಯದ ಟ್ರಸ್ಟ್‌ಗೆ ಸೇರಿದ್ದ 19 ಎಕರೆ ಭೂಮಿಯನ್ನು ಅಕ್ರಮವಾಗಿ ಮಾರಾಟ ಹಾಗೂ ವರ್ಗಾ ವಣೆ ಮಾಡಿದ ಆರೋಪ ಹೊರಿಸಲಾಗಿದೆ. ದೇವಾಲಯ ನಿರ್ಮಾಣಕ್ಕಾಗಿ ನಗರದ ಹೃದಯಭಾಗದಲ್ಲಿ ಈ ಭೂಮಿ ಮೀಸಲಿಡಲಾಗಿತ್ತು. ನ್ಯಾಯಾಲಯದ ಆದೇಶದ ಮೇರೆಗೆ ಸಿಬಿಐ ಈ ಎಲ್ಲ ಆರೋಪಿಗಳ ವಿರುದ್ಧ ಎಫ್ಐಆರ್‌ ದಾಖಲಿಸಿದೆ. ಈ ಭೂಹಗರಣದಲ್ಲಿ ಭಾಗಿಯಾದ ಇತರರ ಬಗ್ಗೆ ಸಾಕ್ಷ್ಯ ಸಂಗ್ರಹಿಸಲಾಗುತ್ತಿದೆ ಎಂದು ಸಿಬಿಐ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next