Advertisement

ಹೊಸಪೇಟೆ: ಜೆಸ್ಕಾಂ ಸೆಕ್ಷನ್ ಅಧಿಕಾರಿ ಲೋಕಾಯುಕ್ತರ ಬಲೆಗೆ

07:23 AM Oct 29, 2022 | Team Udayavani |

ಹೊಸಪೇಟೆ: ಲಂಚ ಪಡೆಯುತ್ತಿದ್ದ ವೇಳೆ ಜೆಸ್ಕಾಂ ಸೆಕ್ಷನ್ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದ ಘಟ‌ನೆ ಹಗರಿಬೊಮ್ಮನಹಳ್ಳಿ ಪಟ್ಟಣದ ಜೆಸ್ಕಾಂ ಕಚೇರಿಯಲ್ಲಿ ಘಟನೆ ಶುಕ್ರವಾರ ನಡೆದಿದೆ.

Advertisement

ಜೆಸ್ಕಾಂ ಸೆಕ್ಷನ್ ಅಧಿಕಾರಿ ಎಚ್.ಫಕ್ಕಿರಪ್ಪ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ಹಗರಿಬೊಮ್ಮನಹಳ್ಳಿ ತಾಲೂಕಿನ ಬಂಡಿಹಳ್ಳಿ ಗ್ರಾಮದ ನಿವಾಸಿ ರೈತ ದಾದಾಪೀರ್ ಎಂಬುವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಬಂಡಿಹಳ್ಳಿ ಗ್ರಾಮದ ಹೊಲವೊಂದರಲ್ಲಿ ಟಿಸಿ ಸುಟ್ಟಿದ್ದ ಹಿನ್ನಲೆಯಲ್ಲಿ ಬದಲಾವಣೆಗೆ 15 ಸಾವಿರ ರೂ. ಗಳ ಬೇಡಿಕೆಯನ್ನು ಜೆಸ್ಕಾಂ ಅಧಿಕಾರಿ ಇಟ್ಟಿದ್ದರು. ಮುಂಗಡವಾಗಿ 2 ಸಾವಿರ ರೂಗಳನ್ನು ರೈತ ದಾದಾಪೀರ್ ಅವರಿಂದ ಪಡೆದಿದ್ದರು. ಜೆಸ್ಕಾಂ ಎಇಇ ಕಚೇರಿಯಲ್ಲಿ 4 ಸಾವಿರ ರೂ. ಹಣ ನೀಡುವ ವೇಳೆ ಅಧಿಕಾರಿಗಳು ದಾಳಿ ನಡೆಸಿ ಸೆಕ್ಷನ್ ಅಧಿಕಾರಿ ಎಚ್.ಫಕ್ಕಿರಪ್ಪ ರನ್ನು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next