Advertisement

Hoskote: 16.50 ಲ.ರೂ. ಲಂಚ ಪಡೆಯುವಾಗ ಇಬ್ಬರು ಅಧಿಕಾರಿಗಳ ಸೆರೆ

12:03 AM Oct 28, 2024 | Team Udayavani |

ಹೊಸಕೋಟೆ: ಆವಲಹಳ್ಳಿ ಬೆಸ್ಕಾಂ ಅಧಿಕಾರಿಗಳು 16.50 ಲಕ್ಷ ರೂ. ಲಂಚ ಸ್ವೀಕರಿಸುವಾಗ ಜಿಲ್ಲಾ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ.

Advertisement

ಎಇಇ ರಮೇಶ್‌ ಬಾಬು ಮತ್ತು ಸೆಕ್ಷನ್‌ ಆಫೀಸರ್‌ ನಾಗೇಶ್‌ ಬಂಧಿತರು. ಬಂಧಿತರಿಂದ ನಗದು 16.50 ಲಕ್ಷ ರೂ. ವಶಕ್ಕೆ ಪಡೆದಿದ್ದಾರೆ.

ಬೊಮ್ಮೇನಹಳ್ಳಿ ಮುತ್ತು ಸ್ವಾಮಿ ಅವರ ಜಮೀನಿನಲ್ಲಿ ನಿರ್ಮಿಸಿರುವ ಲೇಔಟ್‌ಗೆ ವಿದ್ಯುತ್‌ ಸಂಪರ್ಕ ನೀಡಲು ಅಧಿ ಕಾರಿಗಳು ಚಕ್ರ ಎಲೆಕ್ಟ್ರಿಕಲ್ಸ್‌ ಸೀನಿಯರ್‌ ಮ್ಯಾನೇಜರ್‌ ಜಯ ಕುಮಾರ್‌ಗೆ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಜಯಕುಮಾರ್‌ ಅ. 25ರಂದು ಲೋಕಾಯುಕ್ತಕ್ಕೆ ದೂರನ್ನು ಸಲ್ಲಿಸಿದ್ದರು.

ಶನಿವಾರ ಜಯಕುಮಾರ್‌ ಆವಲಹಳ್ಳಿ ಅವರಿಂದ ಬೆಸ್ಕಾಂ ಅಧಿಕಾರಿ ರಮೇಶ್‌ ಬಾಬು ಲಂಚ ಪಡೆಯುವಾಗ ಲೋಕಾಯುಕ್ತ ತಂಡ ದಾಳಿ ಮಾಡಿ ಬಂಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next