Advertisement

ಬಾಗೇಪಲ್ಲಿ ನಡೆಯಬೇಕಿದ್ದ ಜಲಧಾರೆ ಕಾರ್ಯಕ್ರಮ ಮುಂದೂಡಿಕೆ

06:24 PM Apr 16, 2022 | Team Udayavani |

ಗುಡಿಬಂಡೆ : ಜೆ.ಡಿ.ಎಸ್ ಪಕ್ಷದ ವತಿಯಿಂದ ಏ.17 ರಂದು ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯಬೇಕಾಗಿದ್ದ ಜಲಧಾರೆ ಕಾರ್ಯಕ್ರಮ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ನಿಧನದಿಂದ ಮುಂದೂಡಲಾಗಿದೆ ಎಂದು ಜೆ.ಡಿ.ಎಸ್ ಮುಖಂಡ ಡಿ.ಜೆ.ನಾಗರಾಜರೆಡ್ಡಿ ಪತ್ರಿಗೋಷ್ಟಿಯಲ್ಲಿ ತಿಳಿಸಿದರು.

Advertisement

ರಾಜ್ಯದಲ್ಲಿ ಏಪ್ರಿಲ್ 16ರಿಂದ ಜೆ.ಡಿ.ಎಸ್. ಪಕ್ಷದ ವತಿಯಿಂದ ಜಲಧಾರೆ ರಥ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅದರಂತೆ ಏ. 17 ರಂದು ಸಹ ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾರ್ಯಕ್ರಮ ನಡೆಯಬೇಕಾಗಿತ್ತು, ಆದರೆ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ರವರ ಅಕಾಲಿಕ ಮರಣದಿಂದಾಗಿ ಹಾಗೂ ಅವರ ಮರಣದಿಂದ ಅವರ ಆತ್ಮೀಯರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವಗೌಡ ಮತ್ತು ಹೆಚ್.ಡಿ.ಕುಮಾರಸ್ವಾಮಿ ರವರುಗಳಿಗೂ ಸಹ ತುಂಬಾ ಮನಸ್ಸಿಗೆ ದುಃಖ ತಂದ ಸಂಗತಿಯಾಗಿದ್ದರಿಂದ, ಅವರ ಮರಣ ಹೊಂದಿದ ಕೆಲ ದಿನಗಳಲ್ಲೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸರಿಯಲ್ಲ ಎಂದು ತಿಳಿಸಿ, ಬಾಗೇಪಲ್ಲಿ ಕ್ಷೇತ್ರದಲ್ಲಿ ಕಾರ್ಯಕ್ರಮ ಮುಂದೂಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಜೆ.ಡಿ.ಎಸ್. ಮುಖಂಡರಾದ ಜಿ.ಎಲ್.ಮುರಳಿಕೃಷ್ಣ, ಜಗನ್ನಾಥ್, ಬಷೀರ್, ಲಕ್ಷ್ಮೀನಾರಾಯಣಪ್ಪ ಸೇರಿದಂತೆ ಮುಂತಾದವರು ಹಾಜರಿದ್ದರು.

ಇದನ್ನೂ ಓದಿ : ಸಾವಯವ ಕೃಷಿಯಿಂದ ಲಾಭ-ನೆಮ್ಮದಿ; ಮಹಿಮಾ ಪಟೇಲ

Advertisement

Udayavani is now on Telegram. Click here to join our channel and stay updated with the latest news.

Next