Advertisement

ಜೈನ ಮುನಿ ತರುಣ ಸಾಗರ ಜಿನೈಕ್ಯ

06:00 AM Sep 02, 2018 | |

ಹೊಸದಿಲ್ಲಿ: ಜೈನ ಮುನಿ ತರುಣ ಸಾಗರ ಮಹಾರಾಜ್‌ (51) ಶನಿವಾರ ಮುಂಜಾವ 3 ಗಂಟೆಗೆ ದಿಲ್ಲಿಯ ರಾಧಾಪುರಿ ಜೈನ ದೇಗುಲದಲ್ಲಿ ಜಿನೈಕ್ಯ ರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡು ತಮ್ಮ ಚಾತುರ್ಮಾಸ ಸ್ಥಳವಾದ ರಾಧಾಪುರಿ ಜೈನ ದೇಗುಲಕ್ಕೆ ವಾಪಸಾಗಿ, ಔಷಧ ಸೇವನೆ ನಿಲ್ಲಿಸಿ ಸಲ್ಲೇಖನ ವ್ರತ ಆರಂಭಿಸಿದ್ದರು. ಗುರುವಾರ ಆರೋಗ್ಯ ಬಿಗಡಾಯಿಸಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

Advertisement

ಅಂತ್ಯ ಸಂಸ್ಕಾರವು ಜೈನ ಮುನಿ ಸೌರಭ ಸಾಗರರ ಸಮ್ಮುಖದಲ್ಲಿ ಮೋದಿ ನಗರದಲ್ಲಿರುವ ತರುಣ ಸಾಗರ ಧಾಮದಲ್ಲಿ ನಡೆಸಲಾಗಿದೆ. ತರುಣ ಸಾಗರ ಮಹಾರಾಜರ ನಿಧನಕ್ಕೆ ಪ್ರಧಾನಿ ಮೋದಿ, ಗೃಹ ಸಚಿವ ರಾಜನಾಥ್‌ ಸಿಂಗ್‌ ಸಹಿತ ದೇಶದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ತಮ್ಮ ವಿಶಿಷ್ಟ ವಿಚಾರಧಾರೆಗಳಿಂದ ಹೆಸರಾಗಿದ್ದ ತರುಣ ಸಾಗರಜೀ, ಹರಿಯಾಣ ಹಾಗೂ ಮಧ್ಯಪ್ರದೇಶ ವಿಧಾನಸಭೆಯನ್ನು ಉದ್ದೇಶಿಸಿಯೂ ಪ್ರವಚನ ನೀಡಿದ್ದರು. ಹರಿಯಾಣ ವಿಧಾನಸಭೆಯಲ್ಲಿ ಅವರ ಪ್ರವಚನ ವಿವಾದ ಉಂಟು ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next