Advertisement

Jai Sriram ಘೋಷಣೆ: ಮುಸ್ಲಿಂ ವೃದ್ಧನಿಗೆ ಹಿಂಸೆ; ಶಾಸಕ ಜನಾರ್ದನ ರೆಡ್ಡಿ ಖಂಡನೆ

08:56 PM Dec 01, 2023 | Team Udayavani |

ಗಂಗಾವತಿ:ಕಳೆದ ನ.25ರಂದು ಮಧ್ಯೆ ರಾತ್ರಿ ಮುಸ್ಲಿಂ ಅಂಧ ವೃದ್ದನನ್ನು ಬೈಕ್ ಮೇಲೆ ಸಿದ್ದಿಕೇರಿಗೆ ಕರೆದೊಯ್ದು ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಹಲ್ಲೆ ನಡೆಸಿ ಬಳಿ ಇದ್ದ ಹಣ ದೋಚಿ ಗಡ್ಡಕ್ಕೆ ಬೆಂಕಿ ಹಚ್ಚಿದ ಅಮಾನವೀಯ ಘಟನೆಯನ್ನು ಶಾಸಕ ಗಾಲಿ ಜನಾರ್ದನರೆಡ್ಡಿ ಉಗ್ರವಾಗಿ ಖಂಡಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪರಸ್ಪರ ಕೋಮಿನ ಜನರು ಪ್ರೀತಿ ,ಪ್ರೇಮ ಗೌರವದಿಂದ ಶತಮಾನಗಳಿಂದ ಬಾಳಿಬದುಕುತ್ತಿರುವ ನಮ್ಮ ದೇಶದಲ್ಲಿ ಕೆಲವು ಕೋಮುಶಕ್ತಿಗಳಿಂದ ಇಂತಹ ಘಟನೆಗಳು ನಡೆಯುತ್ತಿದ್ದು ಕೂಡಲೇ ದುಷ್ಕರ್ಮಿಗಳನ್ನು ಬಂಧಿಸುವಂತೆ ಪೊಲಿಸ್ ಇಲಾಖೆಗೆ ಸೂಚನೆ ನೀಡಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದ ಮೇಲಾಧಿಕಾರಿಗಳ ಜತೆ ಮಾತನಾಡಿದ್ದು ಕೃತ್ಯವೆಸಗಿದವರು ಎಂತಹ ಪ್ರಭಾವಿಗಳಾಗಿದ್ದರೂ ಕಠಿಣ ಶಿಕ್ಷೆ ಕೊಡಿಸಲಾಗುತ್ತದೆ.

ಕಿಡಿಗೇಡಿಗಳು ಮಾಡಿರುವ ಕೃತ್ಯವನ್ನು ಪೊಲೀಸ ಇಲಾಖೆ ಗಂಭೀರವಾಗಿ ಪರಿಗಣಿಸಿ ಅವರನ್ನು ಪತ್ತೆ ಹಚ್ಚಿ ಬಂಧಿಸಲಿದೆ.

ಅನ್ಯ ಕಾರ್ಯದ ನಿಮಿತ್ತ ಬೆಂಗಳೂರಿನಲ್ಲಿದ್ದು ಗಂಗಾವತಿ ತೆರಳಿದ ತಕ್ಷಣ ಹುಸೇನಸಾಬ ಇವರ ನಿವಾಸಕ್ಕೆ ತೆರಳಿ ಧೈರ್ಯ ತುಂಬಲಾಗುತ್ತದೆ. ಗಂಗಾವತಿ ಕ್ಷೇತ್ರದಲ್ಲಿ ಕೋಮು ಸೌಹಾರ್ದ ಕಾಪಾಡಿಕೊಂಡು ಅಭಿವೃದ್ಧಿ ಪರ್ವ ಆರಂಭಿಸಲಾಗುತ್ತದೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next