Advertisement

ಬಿಜೆಪಿಯಿಂದ ಟಿಕೆಟ್ ವಿಚಾರದಲ್ಲಿ ಯಾವ ವಿಸ್ಮಯವೂ ನಡೆಯಲಾರದು: Jagadish Shettar

09:13 AM Apr 16, 2023 | Team Udayavani |

ಹುಬ್ಬಳ್ಳಿ: ಬಿಜೆಪಿಯಿಂದ ಟಿಕೆಟ್ ವಿಚಾರದಲ್ಲಿ ಯಾವ ವಿಸ್ಮಯವೂ ನಡೆಯಲಾರದು, ನಡೆದರು ಹಿಂದೆ ಹೋಗದ ರೀತಿಯಲ್ಲಿ ನಾನು ಮುಂದೆ ಹೆಜ್ಜೆ ಇರಿಸಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಸ್ಪಷ್ಟಪಡಿಸಿದರು.

Advertisement

ರವಿವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಶಿರಸಿಗೆ ತರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್ ವಿಚಾರದಲ್ಲಿ ಕೊನೆ ಗಳಿಗೆಯ ವಿಸ್ಮಯ ನಡೆಯುವ ಯಾವ ವಿಶ್ವಾಸವೂ ನನಗಿಲ್ಲ.ರಾಜ್ಯದಲ್ಲಿ ಬಿಜೆಪಿ ಪಕ್ಷದ ಉಸ್ತುವಾರಿ ಹಾಗೂ ಚುನಾವಣೆ ಉಸ್ತುವಾರಿ ಪಕ್ಷವನ್ನು ಒಲಿ ಕೊಡುವುದಕ್ಜೆ ನಿರ್ಧರಿಸಿದಂತಿದೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಜೆ.ಪಿ.ನಡ್ಡಾ ಅವರಿಗೆ ಇಲ್ಲಿನ ವಾಸ್ತವ ಚಿತ್ರಣ ನೀಡದೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಪಕ್ಷದ ಹಿತಾಸಕ್ತಿ ಗೆ ಧಕ್ಕೆ ತರುವ ಕೆಲಸಕ್ಕೆ ಮುಂದಾಗಿದ್ದಾರೆ.

ಪಕ್ಷದಲ್ಲಿ ಶಿಸ್ತು, ಹಿರಿಯರಿಗೆ ಗೌರವ ಇಲ್ಲ ಎಂಬುದಕ್ಕೆ ಹಲವು ವಿದ್ಯಮಾನಗಳು ಸಾಕ್ಷಿ ಹೇಳುತ್ತಿವೆ ಎಂದರು.
ಶಿರಸಿ ತರಳಿ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಇಂದೇ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುವೆ.

ಪ್ರಮುಖರ ಸಭೆ ಕರೆದು ಚರ್ಚಿಸಿ ಮುಂದಿನ ನಡೆ ಘೋಷಿಸುವೆ. ಅವಕಾಶಗಳು ಮುಕ್ತವಾಗಿವೆ ಎಂದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ ನಂತರದ ಇದುವರೆಗೂ ಪಕ್ಷದ ವರಿಷ್ಠರು, ಪ್ರಮುಖರು ಯಾರೊಬ್ಬರು ನನ್ನನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next