Advertisement

ಇದು ಯಾರ ಸಮಾಧಿ ಎಂದ ಅರಣ್ಯ ಸಚಿವ

06:25 AM Sep 29, 2018 | |

ಚಿಕ್ಕಬಳ್ಳಾಪುರ: ತಾಲೂಕಿನ ಮುದ್ದೇನಹಳ್ಳಿಯಲ್ಲಿ ಶುಕ್ರವಾರ ಗ್ರಾಮದ ಯುವಕರು ನೂತನವಾಗಿ ಸ್ಥಾಪಿಸಿದ್ದ ಸರ್‌.ಎಂ.ವಿಶ್ವೇಶ್ವರಯ್ಯನವರ ಪುತ್ಥಳಿಯನ್ನು ಅರಣ್ಯ ಸಚಿವ ಆರ್‌.ಶಂಕರ್‌ ಅನಾವರಣಗೊಳಿಸಿದರು. 

Advertisement

ಇದಕ್ಕೂ ಮೊದಲು ಮುದ್ದೇನಹಳ್ಳಿಯಲ್ಲಿರುವ ವಿಶ್ವೇಶ್ವರಯ್ಯನವರ ಸಮಾಧಿ ಸ್ಥಳಕ್ಕೆ ಬಂದು ಪುಪ್ಪ ನಮನ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಸಚಿವರು, ಇದು ಯಾರ ಸಮಾಧಿ ಸ್ಥಳ ಎಂದು ತಮ್ಮ ಆಪ್ತ ಸಹಾಯಕನನ್ನು ಕೇಳಿ ತಿಳಿದುಕೊಂಡ ಪ್ರಸಂಗ ನಡೆಯಿತು. ಸರ್‌ಎಂವಿ ಪುತ್ಥಳಿ ಅನಾವರಣಕ್ಕೆ ಬಂದಿದ್ದ ಸಚಿವರಿಗೆ ಇದು ಸರ್‌ಎಂವಿಯವರ ಸಮಾಧಿ ಸ್ಥಳ ಎಂಬುದು ತಿಳಿಯದೇ ಹೋಗಿದ್ದು ನೆರದಿದ್ದವರಲ್ಲಿ ಟೀಕೆಗೆ ಗುರಿಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next