Advertisement

ಜನಾರ್ದನ ರೆಡ್ಡಿ ಪಕ್ಷಕ್ಕೆ ಇಕ್ಬಾಲ್ ಅನ್ಸಾರಿ ಆಪ್ತರ ಸೇರ್ಪಡೆ

06:26 PM Jan 02, 2023 | Team Udayavani |

ಗಂಗಾವತಿ: ಗಂಗಾವತಿ ಯಿಂದ ಚುನಾವಣಾ ಆಖಾಡಕ್ಕಿಳಿಯಲು ಸಿದ್ದತೆ ನಡೆಸುತ್ತಿರುವ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ನೂತನ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿಗೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯ ಆಪ್ತರಲ್ಲಿ ಪ್ರಮುಖರು ಬೆಂಗಳೂರಿನ ರೆಡ್ಡಿ ನಿವಾಸಕ್ಕೆ ತೆರಳಿ ಹಾಲುಮತ ಕುರುಬ ಸಮಾಜದ ಸಂಕೇತವಾಗಿರುವ ಕರಿ ಕಂಬಳಿ ಹೊದಿಸಿ ಸನ್ಮಾನಿಸಿ ಶುಭ ಕೋರಿ ಪಕ್ಷ ಸೇರ್ಪಡೆ ಕುರಿತು ಮಾತುಕತೆ ನಡೆಸಿದರು.

Advertisement

ಹಿರಿಯ ಪತ್ರಕರ್ತ ಸೈಯದ್ ಅಲಿ ಹಾಗೂ ಕೆಲ ಮುಸ್ಲಿಂ ಗುರುಗಳ ಸಮ್ಮುಖದಲ್ಲಿ ಕಾಂಗ್ರೆಸ್ ಹಾಗೂ ಹಾಲುಮತ ಕುರುಬ ಸಮಾಜದ ಮುಖಂಡರಾದ ಬೆಣಕಲ್ ಬೆಟ್ಟಪ್ಪ ಹಾಗೂ ಹೊಸಳ್ಳಿ ಶಿವಕುಮಾರ ಅಪಾರ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ರೆಡ್ಡಿ ಪಕ್ಷವನ್ನು ಸೇರುವ ಕುರಿತು ಮಾತುಕತೆ ನಡೆಸಿದರು.

ಜ.03 ರಂದು ಬೂದಗುಂಪಾ ಗ್ರಾಮದಿಂದ ಗಂಗಾವತಿ ವರೆಗೆ ಜನಾರ್ದನರೆಡ್ಡಿ ನೇತೃತ್ವದಲ್ಲಿ ಬೈಕ್ ರ‍್ಯಾಲಿ ನಡೆಯಲಿದ್ದು ಇದರಲ್ಲಿ ಇನ್ನೊರ್ವ ಕಾಂಗ್ರೆಸ್ ಮುಖಂಡ ಹಾಗೂ ಅನ್ಸಾರಿ ಆಪ್ತ ಅರಸಿನಕೇರಿ ಹನುಮಂತಪ್ಪ ನೇತೃತ್ವದಲ್ಲಿ ಹಲವು ಕಾಂಗ್ರೆಸ್ ನಾಯಕರು ಭಾಗಿಯಾಗಲಿದ್ದಾರೆ. ರೆಡ್ಡಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವವರಲ್ಲಿ ಹಾಲುಮತ ಕುರುಬ ಸಮಾಜದವರೆ ಹೆಚ್ಚಿರುವುದು ರಾಜಕೀಯ ಮಹತ್ವ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next