Advertisement

ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ

09:14 AM Feb 02, 2019 | Team Udayavani |

ಚಿತ್ರದುರ್ಗ: ನಾಲ್ಕನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಎಸ್‌.ಆರ್‌. ಗುರುನಾಥ ಅವರ ಮನೆಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಪದಾಧಿಕಾರಿಗಳು ಭೇಟಿ ನೀಡಿ ಅಧಿಕೃತವಾಗಿ ಆಹ್ವಾನ ನೀಡಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಡಾ| ದೊಡ್ಡಮಲ್ಲಯ್ಯ, ಸಮ್ಮೇಳನಾಧ್ಯಕ್ಷರ ಆಯ್ಕೆ ಎಲ್ಲ ಸಾಹಿತ್ಯಾಸಕ್ತರಿಗೂ ಸಂತಸ ತಂದಿದೆ. ಗುರುನಾಥ್‌ ಅವರು ಅತ್ಯುತ್ತಮ ಕಥೆಗಾರರಾಗಿ ಕನ್ನಡ ಸಾಹಿತ್ಯದಲ್ಲಿ ಬೆರಗು ಮೂಡಿಸಿದ್ದಾರೆ ಎಂದರು.

ಪರಿಷತ್ತಿನ ಅಧಿಕೃತ ಆಹ್ವಾನ ಸ್ವೀಕರಿಸಿ ಮಾತನಾಡಿದ ಎಸ್‌.ಆರ್‌. ಗುರುನಾಥ್‌, ಈ ಗೌರವಕ್ಕೆ ನಾನೆಷ್ಟು ಅರ್ಹನೆಂದು ತಿಳಿಯದು. ನಮ್ಮ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ನನ್ನನ್ನು ಆಯ್ಕೆ ಮಾಡಿದುದು ದೊಡ್ಡ ಗೌರವ. ಅದನ್ನು ಶಿರಸಾವಹಿಸುತ್ತೇನೆ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಆರ್‌. ದಾಸೇಗೌಡ ಅವರು ಸರ್ವಾಧ್ಯಕ್ಷರ ಆಯ್ಕೆ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಕೆ.ಎಂ. ಯೂಸೂಫ್‌, ಗೌರವ ಕೋಶಾಧ್ಯಕ್ಷ ಎಂ. ಗೋವಿಂದಪ್ಪ, ಮಹಿಳಾ ಪ್ರತಿನಿಧಿ ಶರೀಫಾಬಿ, ತಾಲೂಕು ಕಸಾಪದ ಗೌರವ ಕಾರ್ಯದರ್ಶಿ ಶ್ಯಾಮಲಾ ಶಿವಪ್ರಕಾಶ್‌, ಗೌರವ ಕೋಶಾಧ್ಯಕ್ಷ ಎಸ್‌. ಸುರೇಶ್‌, ತಾಲೂಕು ಪರಿಷತ್ತಿನ ಪದಾಧಿಕಾರಿ ಅಲ್ಲಿಪೀರ್‌, ನಿವೃತ್ತ ಪ್ರಾಂಶುಪಾಲರಾದ ಜೆ. ಯಾದವ ರೆಡ್ಡಿ, ಎಸ್‌.ಆರ್‌. ಶಿವಕುಮಾರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next