Advertisement

ಹೊರ ರಾಜ್ಯಗಳಿಂದ ಬಂದವರ ಮಾಹಿತಿ ಸಂಗ್ರಹಿಸಲು ಸೂಚನೆ

06:57 AM Jun 21, 2020 | Lakshmi GovindaRaj |

ಹಾಸನ: ಹೊರ ರಾಜ್ಯಗಳಿಂದ ಗ್ರಾಮಗಳಿಗೆ ಬಂದಿರುವವರ ಮನೆಗಳಿಗೆ ಗ್ರಾಮ ಲೆಕ್ಕಿಗರು ಹಾಗೂ ಪಿಡಿಒ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‌ ರಾಜ್‌ಸಿಂಗ್‌ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್‌ 19 ನಿಯಂತ್ರಣ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದರು.

Advertisement

ಸೂಪರ್‌ ಮಾರ್ಕೆಟ್‌ ಗಾರ್ಡ್‌ಗಳು, ಜನ ಸಂಪರ್ಕದಲ್ಲಿರುವ  ಸಿಬ್ಬಂದಿ, ಕೊಳೆಗೇರಿ  ಯಲ್ಲಿರುವವರು, ಕೊರಿಯರ್‌ ಹುಡುಗರು, ರಸ್ತೆ ಬದಿಯ ವ್ಯಾಪಾರಿಗಳು, ಬ್ಯೂಟಿ ಪಾರ್ಲರ್‌ ಸಿಬ್ಬಂದಿ ಹಾಗೂ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಿಬ್ಬಂದಿಯನ್ನು ಕೋಕೋವಿಡ್‌ 19 ಪರೀಕ್ಷೆಗೆ ಒಳಪಡಿಸಬೇಕು ಎಂದರು. ಕೋವಿಡ್‌ 19 ಸೇವೆಯಲ್ಲಿ ನಿರತರಾಗಿದ್ದ  ಜಿಲ್ಲೆಯ 9 ಮಂದಿ ಪೊಲೀಸರಿಗೆ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಎಲ್ಲ ಪೊಲೀಸ್‌ ಇಲಾಖಾ ಸಿಬ್ಬಂದಿಗಳಿಗೆ ಮತ್ತು ಚೆಕ್‌ಪೋಸ್ಟ್‌ನಲ್ಲಿ ಕಾರ್ಯನಿರ್ವ ಹಿಸುತ್ತಿರುವ ಸಿಬ್ಬಂದಿಗೆ ಕರೊನಾ  ಪರೀಕ್ಷೆ ಮಾಡಿಸಿ ಎಂದು ಪೊಲೀಸ್‌ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ನಗರದ ವ್ಯಾಪ್ತಿಯಲ್ಲಿರುವ ಸಮು ದಾಯ ಕ್ವಾರಂಟೈನ್‌ ಕೇಂದ್ರ ಹಾಗೂ ಎಲ್ಲ ತಾಲೂಕುಗಳ ಕ್ವಾರಂಟೈನ್‌ ಕೇಂದ್ರ ಗಳ ಸ್ವತ್ಛತೆ, ಸಮರ್ಪಕ ನೀರಿನ ಸೌಲಭ್ಯ ಹಾಗೂ ಸ್ಯಾನಿಟೈಸಿಂಗ್‌ ಮಾಡುವಂತೆ  ಅಧಿಕಾರಿಗಳಿಗೆ ಸೂಚನೆ ನೀಡಿದರು. ಸೇವಾ ಸಿಂಧು ಆ್ಯಪ್‌ ಮೂಲಕ ಹೊರ ರಾಜ್ಯಗಳಿಗೆ ಒಂದು ಬಾರಿ ಹೋಗಿ ಬಂದವರಿಗೆ ಕೊರೋನಾ ಕುರಿತು ಅರಿವು ಮೂಡಿಸಿ ಎರಡನೇ ಬಾರಿ ಹೋಗಿ ಬಂದವ ರನ್ನು ಕ್ವಾರಂಟೈನ್‌  ಮಾಡಿ ಹಾಗೂ ಮೂರನೇ ಬಾರಿ ಹೋಗಿ ಬಂದವರ ಮೇಲೆ ಎಫ್ ಐಆರ್‌ ದಾಖಲಿಸುವಂತೆ ಸೂಚನೆ ನೀಡಿದರು.

ಮಾಸ್ಕ್ ಧರಿಸದೇ ಓಡಾಡುವವರು ಹಾಗೂ ಸಾಮಾಜಿಕ ಅಂತರ ಕಾಯ್ದು ಕೊಳ್ಳದವರಿಗೆ ದಂಡ ವಿಧಿಸಬೇಕು. ಸೋಂಕಿತ  ರನ್ನು ಗುಣಪಡಿಸಲು ನೀಡುತ್ತಿರುವ ಔಷಧೋಪಚಾರ ಕುರಿತು ಮಾಹಿತಿ ಪಡೆದರು. ಡೀಸಿ ಆರ್‌. ಗಿರೀಶ್‌, ಎಡೀಸಿ ಕವಿತಾ ರಾಜಾರಾಂ, ಎ.ಸ್ಪಿ ಬಿ.ಎನ್‌ ನಂದಿನಿ, ಡಿಎಚ್‌ಒ ಡಾ. ಸತೀಶ್‌, ಹಿಮ್ಸ್‌ ನಿರ್ದೇಶಕ ಡಾ.ಬಿ.ಸಿ. ರವಿಕುಮಾರ್‌, ಜಿಲ್ಲಾ  ಶಸOಉ ಚಿಕಿತ್ಸಕ ಡಾ.ಕೃಷ್ಣಮೂರ್ತಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next