Advertisement

ಲಸಿಕೆ ಪಡೆಯಲು ಕಾಲೇಜುಗಳಿಗೆ ಸೂಚನೆ

10:27 PM Jun 26, 2021 | Team Udayavani |

ಹಾಸನ: ಶಾಲಾ ಕಾಲೇಜು ಪುನರಾರಂಭವಾಗುವ ಮೊದಲು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಮೊದಲನೇ ಡೋಸ್‌ ಕೊರೊನಾಲಸಿಕೆ ನೀಡುವಂತೆ ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಅವರು ಸೂಚಿಸಿದರು.

Advertisement

ಅಧಿಕಾರಿಗಳ ಸಭೆ ನಡೆಸಿದ ಅವರು,ಶಾಲಾ ಕಾಲೇಜು ಪ್ರಾಂಶುಪಾಲರು ಆರ್‌ಸಿಎಚ್‌ ಅಧಿಕಾರಿ ಡಾ.ಕಾಂತರಾಜ್‌ ಹಾಗೂ ಡಿಎಚ್‌ಒ ಡಾ.ಸತೀಶ್‌ಕುಮಾರ್‌ ಅವರನ್ನು ಭೇಟಿ ಮಾಡಿ ತಮ್ಮ ಕಾಲೇಜಿಗೆ ಅವಶ್ಯವಿರುವ ಲಸಿಕೆಯ ಕ್ರಿಯಾ ಯೋಜನೆ ಸಲ್ಲಿಸಿಒಂದು ವಾರದೊಳಗೆ ಲಸಿಕಾ ಕಾರ್ಯಕ್ರಮವನ್ನು ಮುಗಿಸಬೇಕು ಎಂದರು.

ಆರ್‌ಸಿಎಚ್‌ ಅಧಿಕಾರಿ ಡಾ. ಕಾಂತರಾಜ್‌ಅವರು ಮಾತನಾಡಿ, 18 ವರ್ಷ ತುಂಬಿದಎಲ್ಲ ವಿದ್ಯಾರ್ಥಿಗಳಿಗೆ ಲಸಿಕೆ ನೀಡ ಲಾಗುತ್ತಿದೆ. ಆ ಕಾರಣವಾಗಿ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾ ಲರು ಜಿಲ್ಲಾ ಕುಟುಂಬ ಮತ್ತು ಕಲ್ಯಾಣ ಅಧಿಕಾರಿಗಳನ್ನು ಸಂಪರ್ಕಿಸಿ ಕ್ರಿಯಾ ಯೋಜನೆಯನ್ನು ಸಲ್ಲಿಸಬೇಕುಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next