Advertisement

ವೆಜ್‌ ಬಿರಿಯಾನಿಯಲ್ಲಿ ಚಿಕನ್‌ ಮೂಳೆ ಪತ್ತೆ: ಗ್ರಾಹಕನಿಂದ ಠಾಣೆಗೆ ದೂರು

12:05 PM Dec 28, 2022 | Team Udayavani |

ಮಧ್ಯ ಪ್ರದೇಶ: ವಿಚಿತ್ರ ಕಾರಣಕ್ಕೆ ಗ್ರಾಹಕನೊಬ್ಬ ಹೊಟೇಲ್‌ ಮಾಲಕನ ವಿರುದ್ಧ ದೂರು ದಾಖಲಿಸಿದ ಘಟನೆ ಇಂದೋರ್‌ ನ ವಿಜಯ್‌ ನಗರ ಪ್ರದೇಶದಲ್ಲಿ ನಡೆದಿದೆ.

Advertisement

ಇತ್ತೀಚೆಗೆ  ಇಂದೋರ್‌ ನ ವಿಜಯ್‌ ನಗರ ಪ್ರದೇಶದಲ್ಲಿನ ಹೊಟೇಲ್‌ ನಲ್ಲಿ ಆಕಾಶ್‌ ದುಬೆ ಎನ್ನುವ ಗ್ರಾಹಕ ವೆಜ್‌ ಬಿರಿಯಾನ್‌ ವೊಂದನ್ನು ಆರ್ಡರ್‌ ಮಾಡಿದ್ದಾರೆ. ಇನ್ನೇನು ಹಸಿವು ಹೆಚ್ಚಾಗುತ್ತಿದೆ ಊಟ ಮಾಡಬೇಕು ಎನ್ನುವಾಗಲೇ ಸಸ್ಯಹಾರಿ ಆಗಿದ್ದ ಆಕಾಶ್‌ ದುಬೆಗೆ ವೆಜ್‌ ಬಿರಿಯಾನಿಯಲ್ಲಿ ಚಿಕನ್‌ ಮೂಳೆಗಳು ಸಿಕ್ಕಿವೆ.

ಈ ವಿಚಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಗ್ರಾಹಕ ಆಕಾಶ್‌ ಹೊಟೇಲ್‌ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಹೊಟೇಲ್‌  ಮಾಲಕರು ಹಾಗೂ ಮ್ಯಾನೇಜರ್ ಕ್ಷಮೆ ಕೇಳಿದ್ದಾರೆ.‌ ಆದರೆ ಇದಕ್ಕೆ ಜಗ್ಗದ ಆಕಾಶ್‌ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

ವಿಜಯ್‌ ನಗರ್‌ ಪೊಲೀಸ್‌ ಠಾಣೆಯಲ್ಲಿ ಹೊಟೇಲ್‌ ಮಾಲಕ  ಸ್ವಪ್ನಿಲ್ ಗುಜರಾತಿ ಅವರ ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಮ್ಯಾನೇಜರ್‌ ಅವರನ್ನು ವಿಚಾರಣೆ ನಡೆಸಿದ್ದಾರೆ. ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next