Advertisement

ಜಿಸ್ಯಾಟ್-31 ಯಶಸ್ವಿ ಉಡಾವಣೆ

01:08 AM Feb 07, 2019 | Team Udayavani |

ಬೆಂಗಳೂರು: ಬಾಹ್ಯಕಾಶ ಕ್ಷೇತ್ರದಲ್ಲಿ ಮತ್ತೂಂದು ಮೈಲಿಗಲ್ಲು ಸಾಧಿಸಿರುವ ಭಾರತ, ಬುಧವಾರ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-31ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

Advertisement

ಅರಬ್ಬಿ ಸಮುದ್ರ, ಬಂಗಾಳಕೊಲ್ಲಿ, ಹಿಂದು ಮಹಾಸಾಗರ ಸೇರಿದಂತೆ ಆಳ ಸಮುದ್ರದಲ್ಲಿ ಸಂಪರ್ಕ ಸಾಧಿಸಲು ಮತ್ತು ದೂರಸಂಪರ್ಕ ಸೇವೆಗಳು, ಎಟಿಎಂಗಳಿಗೆ ವಿಸ್ಯಾಟ್ ಸಂಪರ್ಕ, ಷೇರು ವಿನಿಮಯ, ಈ-ಆಡಳಿತದ ಅಪ್ಲಿಕೇಷನ್‌ಗಳು, ದೂರಸಂಪರ್ಕ ಅಪ್ಲಿಕೇಷನ್ಸ್‌ಗಳಿಗೆ ಅವಶ್ಯವಿದ್ದಾಗ ಡಾಟಾ ಸಗಟು ರೂಪದಲ್ಲಿ ವರ್ಗಾವಣೆ ಮಾಡಲು ಇದರಿಂದ ಅನುಕೂಲ ಆಗಲಿದೆ. ಯೂರೋಪ್‌ ಲಾಂಚ್ ಸರ್ವಿಸ್‌ ಪ್ರೊವೈಡರ್‌- ಏರಿಯಾನ್‌ಸ್ಪೇಸ್‌ ರಾಕೆಟ್ ಸಹಯೋಗದಲ್ಲಿ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-31ನ್ನು ಫ್ರಾನ್ಸ್‌ನ ಕೌರೋದಲ್ಲಿರುವ ಏರಿಯಾನ್‌ ಕೇಂದ್ರದಿಂದ ಬುಧವಾರ ಮುಂಜಾನೆ 2.30ಕ್ಕೆ ಉಡಾವಣೆ ಮಾಡಲಾಯಿತು. ಏರಿಯಾನ್‌-5 ವೆಹಿಕಲ್‌ ಜತೆಗೆ ಜಿಸ್ಯಾಟ್-31 ಯಾವುದೇ ದೋಷವಿಲ್ಲದೇ 42 ನಿಮಿಷಕ್ಕೆ ತನ್ನ ಕಕ್ಷೆ ಸೇರಿದೆ. ಕಕ್ಷೆ ಸೇರಿದ ನಂತರ ಏರಿಯಾನ್‌-5 ವೆಹಿಕಲ್‌ನಿಂದ ಜಿಸ್ಯಾಟ್-31 ಬೇರ್ಪಟ್ಟು ಇಸ್ರೋ ನಿಯಂತ್ರಣಕ್ಕೆ ಬಂದಿದೆ. ಉಡಾವಣೆಯ ನಂತರ ಕೌರೋದಲ್ಲಿ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಇಸ್ರೊ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರ ನಿರ್ದೇಶಕ ಎಸ್‌. ಪಾಂಡಿಯನ್‌, ಇದೊಂದು ಅಮೂಲ್ಯವಾದ ಸಾಧನೆ ಎಂದರು. ಜಿಸ್ಯಾಟ್-31ನ್ನು ಕಕ್ಷೆಗೆ ಸೇರಿಸಲು ಸಹಕರಿಸಿದ ಏರಿಯಾನ್‌ ಸ್ಪೇಸ್‌ಗೂ ಧನ್ಯವಾದ ಸಲ್ಲಿಸಿದರು. ಕು-ಬ್ಯಾಂಡ್‌ ಹೊಂದಿರುವ ಹೈ-ಪವರ್‌(ಶಕ್ತಿಶಾಲಿ) ಸಂವಹನ ಉಪಗ್ರಹ ಇದಾಗಿದ್ದು, ಇದರಿಂದ ಸಾಕಷ್ಟು ಉಪಯೋಗ ಮತ್ತು ಸೇವೆ ಸಿಗಲಿದೆ. ಜತೆಗೆ ಅತಿ ಶೀಘ್ರದಲ್ಲಿ ಕಾಲಾವಧಿ ಮುಗಿಯಲಿರುವ ಉಪಗ್ರಹಗಳ ಸ್ಥಾನವನ್ನು ಇದು ತುಂಬಲಿದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next