Advertisement

ಭಾರತ-ಇಂಗ್ಲೆಂಡ್ ಮೂರನೇ ಏಕದಿನ ಪಂದ್ಯ: ಕಮ್ ಬ್ಯಾಕ್ ಮಾಡುವತ್ತ ಮಿಥಾಲಿ ತಂಡದ ಚಿತ್ತ

04:53 PM Jul 03, 2021 | Team Udayavani |

ಲಂಡನ್: ಇಂಗ್ಲೆಂಡ್ ವನಿತೆಯರ ವಿರುದ್ಧದ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಸೋಲನುಭವಿಸಿರುವ ಮಿಥಾಲಿ ರಾಜ್ ಪಡೆ ಇಂದಿನ ಪಂದ್ಯದಲ್ಲಿ ಗೆದ್ದು, ಮತ್ತೆ ಕಮ್ ಬ್ಯಾಕ್ ಮಾಡಲು ಸಿದ್ದವಾಗಿದೆ.

Advertisement

ಮಳೆಯಿಂದಾಗಿ ಟಾಸ್ ನಿಗದಿತ ಸಮಯಕ್ಕಿಂತ ತಡವಾಗಿ ನಡೆಯಿತು. ಟಾಸ್ ಗೆದ್ದ ಭಾರತ ತಂಡವು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಮಳೆಯ ಕಾರಣದಿಂದ ತಲಾ 47 ಓವರ್ ಗಳ ಪಂದ್ಯ ನಡೆಯಲಿದೆ.

ಇದನ್ನೂ ಓದಿ:ಯಶಸ್ವಿ ನಾಯಕತ್ವವೆಂದರೆ ಟ್ರೋಫಿ ಗೆಲ್ಲುವುದು ಮಾತ್ರವೇ..?

ಭಾರತ ತಂಡವು ಮೊದಲೆರಡು ಪಂದ್ಯಗಳಲ್ಲಿ ಸೋಲನುಭವಿಸಿದೆ. ನಾಯಕಿ ಮಿಥಾಲಿ ರಾಜ್ ಬಿಟ್ಟರೆ ಬೇರೆಯವರಿಂದ ಬ್ಯಾಟಿಂಗ್ ಬೆಂಬಲ ಸಿಗದೆ ತಂಡ ಸಂಕಷ್ಟ ಅನುಭವಿಸಿತು. ಮಿಥಾಲಿ ರಾಜ್ ಎರಡೂ ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ.

ತಂಡಗಳು

Advertisement

ಭಾರತ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರೊಡ್ರೀಗಸ್, ಮಿಥಾಲಿ ರಾಜ್ (ನಾ), ಹರ್ಮನ್‌ಪ್ರೀತ್ ಕೌರ್, ದೀಪ್ತಿ ಶರ್ಮಾ, ಸ್ನೇಹ ರಾಣಾ, ತಾನಿಯಾ ಭಾಟಿಯಾ (ವಿ.ಕೀ), ಶಿಖಾ ಪಾಂಡೆ, ಜುಲಾನ್ ಗೋಸ್ವಾಮಿ, ಪೂನಂ ಯಾದವ್.

ಇಂಗ್ಲೆಂಡ್: ಲಾರೆನ್ ವಿನ್ಫೀಲ್ಡ್ ಹಿಲ್, ಟಮ್ಮಿ ಬ್ಯೂಮಾಂಟ್, ಹೀದರ್ ನೈಟ್ (ನಾ), ನಟಾಲಿಯಾ ಸ್ಕಿವರ್, ಆಮಿ ಎಲ್ಲೆನ್ ಜೋನ್ಸ್ (ವಿ.ಕೀ), ಸೋಫಿಯಾ ಡಂಕ್ಲೆ, ಕ್ಯಾಥರೀನ್ ಬ್ರಂಟ್, ಸಾರಾ ಗ್ಲೆನ್, ಅನ್ಯಾ ಶ್ರಬ್ಸೋಲ್, ಸೋಫಿ ಎಕ್ಲೆಸ್ಟೋನ್, ಕೇಟ್ ಕ್ರಾಸ್

Advertisement

Udayavani is now on Telegram. Click here to join our channel and stay updated with the latest news.

Next