Advertisement

ಪಶುಪತಿನಾಥ ದೇಗುಲ ಭಾರತದ ಅನುದಾನ

08:31 AM Jun 17, 2020 | mahesh |

ಕಠ್ಮಂಡು: ನೇಪಾಳದ ಪುರಾತನ ಸುಪ್ರಸಿದ್ಧ ಪಶುಪತಿನಾಥ ದೇವಸ್ಥಾನದಲ್ಲಿ ನೈರ್ಮಲ್ಯ ಸೌಲಭ್ಯ ಕಲ್ಪಿಸಲು ಭಾರತ ಮುಂದಾ­ಗಿದೆ. ದೇಗುಲದ ಆವರಣ­ದಲ್ಲಿ 2.33 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ನಿರ್ಮಾಣವಾಗಲಿದೆ. ನಕ್ಷೆ ತಗಾದೆ, ಗಡಿಯಲ್ಲಿ ನೇಪಾಳಿ ಪೊಲೀಸರ ದುರ್ವ­ರ್ತನೆಗಳ ನಡುವೆ ಭಾರತದ ಈ ಔದಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಯೋಜನೆ ಸಂಬಂಧ ಭಾರತೀಯ ರಾಯ­ಭಾರ ಕಚೇರಿ, ನೇಪಾಳದ ಫೆಡರಲ್‌ ವ್ಯವಹಾರ ಮತ್ತು ಸಾಮಾನ್ಯ ಆಡಳಿತ ಸಚಿವಾಲಯ, ಕಠ್ಮಂಡು ಮಹಾನಗರ ಪಾಲಿಕೆ ನಡುವೆ ಸೋಮವಾರ ಒಪ್ಪಂದ ಏರ್ಪಟ್ಟಿದೆ. ಯುನೆಸ್ಕೊ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾದ ಪಶುಪತಿನಾಥ ದೇಗುಲದ ಆವರಣದಲ್ಲಿ ಕಠ್ಮಂಡು ಪಾಲಿಕೆ ನೈರ್ಮಲ್ಯ ಸೌಲಭ್ಯ ಕಾಮಗಾರಿ ಆರಂಭಿಸಲಿದೆ. 15 ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next