Advertisement

ಭಾರತ-ಚೀನ ಮುಖಾಮುಖಿ; ಇದಿರೇಟು ನೀಡಲು ಭಾರತ ಸರ್ವಸನ್ನದ್ಧ

11:43 PM Sep 12, 2020 | mahesh |

ಹೊಸದಿಲ್ಲಿ: ಶಾಂತಿ ಮಂತ್ರ ಪಠಿಸುತ್ತಲೇ ಬೆನ್ನಿಗೆ ಚೂರಿ ಇರಿಯುವ ಕೆಲಸ ಮಾಡುತ್ತಿರುವ ಚೀನವು ಮತ್ತೆ ತನ್ನ ಕೆಟ್ಟ ಚಾಳಿ ಮುಂದುವರಿಸಿದೆ. ಲಡಾಖ್‌ ಸನಿಹದ ಪ್ಯಾಂಗಾಂಗ್‌ ತ್ಸೋನ ದಕ್ಷಿಣ ಭಾಗದಲ್ಲಿರುವ ಸ್ಪ್ಯಾಂಗ್ಗರ್‌ ಗ್ಯಾಪ್‌ ಬಳಿ ಚೀನದ ಸಾವಿರಾರು ಸೈನಿಕರು ಟ್ಯಾಂಕರ್‌ಗಳು ಮತ್ತು ಹೋವಿಟ್ಜರ್‌ಗಳೊಂದಿಗೆ ಜಮಾಯಿಸಿದ್ದಾರೆ. ಈ ಮೂಲಕ ಎರಡೂ ಸೇನೆಗಳು ಮುಖಾಮುಖಿಯಾಗಿ ನಿಂತು ಯುದ್ಧ ಮಾಡುವಷ್ಟು ಸನಿಹಕ್ಕೆ ಬಂದಿವೆ.

Advertisement

ಈ ಬೆಳವಣಿಗೆಗಳ ಬೆನ್ನಲ್ಲೇ ಭಾರತೀಯ ಸೇನೆಯೂ ತೀವ್ರ ಕಟ್ಟೆಚ್ಚರ ವಹಿಸಿದೆ. ಚೀನದ ಸೈನಿಕರು ಗಡಿಯ ಸನಿಹಕ್ಕೆ ಬರುತ್ತಿದ್ದಂತೆ ಭಾರತೀಯ ಯೋಧರೂ ಶಸ್ತ್ರಾಸ್ತ್ರ ಗಳೊಂದಿಗೆ ಗಡಿಯತ್ತ ಧಾವಿಸಿದ್ದಾರೆ. ಚೀನದ ಸೇನೆಯ ಅಟಾಟೋಪ ಎದುರಿಸಲು ಸೇನೆಯೂ ಸರ್ವರೀತಿಯಲ್ಲೂ ಸನ್ನದ್ಧವಾಗಿ ನಿಂತಿದೆ ಎಂದು ಸರಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಒಂದು ಆಂಗ್ಲ ವೆಬ್‌ಸೈಟ್‌ ವರದಿ ಮಾಡಿದೆ.

ಮೂಲಗಳ ಪ್ರಕಾರ ಚೀನದ ಮಿಲಿಶಿಯಾ ಸ್ಕ್ವಾಡ್‌ ಈ ಭಾಗಕ್ಕೆ ಬಂದಿದೆ. ಇದರಲ್ಲಿ ಪರ್ವತಾರೋಹಿಗಳು, ಬಾಕ್ಸರ್‌ಗಳು, ಸ್ಥಳೀಯ ಸಮರ ಕ್ಲಬ್‌ನ ಸದಸ್ಯರು ಮತ್ತು ಇತರ ಸಿಬಂದಿ ಇರುತ್ತಾರೆ. ಈ ಸ್ಕ್ವಾಡ್‌ ಅನ್ನು ಚೀನ ಸೇನೆಯ ನೆರವಿಗಾಗಿ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಪಹರಣ: ಗ್ಲೋಬಲ್‌ ಟೈಮ್ಸ್‌ ಧಿಮಾಕು
ಅರುಣಾಚಲ ಪ್ರದೇಶದ ಐವರು ಯುವಕರ ಅಪಹರಣ ಪ್ರಕರಣದ ಬೆನ್ನಲ್ಲೇ ಕಳೆದ ಸೋಮವಾರ ಚೀನ ಸರಕಾರದ ಮುಖವಾಣಿ ಗ್ಲೋಬಲ್‌ ಟೈಮ್ಸ್‌ ಅರುಣಾಚಲ ಪ್ರದೇಶ ಸಂಬಂಧ ಉದ್ಧಟತನ ಮೆರೆದಿತ್ತು. ಇದುವರೆಗೆ ಚೀನವು ಈ ರಾಜ್ಯಭಾರತದ್ದು ಎಂದು ಗುರುತಿಸಿಯೇ ಇಲ್ಲ ಎಂದಿತ್ತು. ಅದು ಟಿಬೆಟ್‌ನ ಮತ್ತೂಂದು ಭಾಗ ಎಂದೇ ನಂಬಿದ್ದೇವೆ ಎಂದು ಬರೆದು ಭಾರತೀಯ ಸಾರ್ವಭೌಮತೆ ವಿಚಾರದಲ್ಲಿ ಮೂಗುತೂರಿಸಿತ್ತು.

ಈ ಉದ್ಧಟತನದ ನಡುವೆಯೇ ಚೀನವು ಸದ್ದಿಲ್ಲದೆ ಭಾರತದ ಯುವಕರನ್ನು ಬಿಡುಗಡೆ ಮಾಡಿದೆ. ಮಾಲ್ಡೀವ್ಸ್‌ ಜತೆ ಅಮೆರಿಕ ಒಪ್ಪಂದ
ಹಿಂದೂ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಚೀನದ ಪ್ರಭಾವವನ್ನು ತಗ್ಗಿಸುವ ಉದ್ದೇಶದಿಂದ ಅಮೆರಿಕ ಸರಕಾರವು ಮಾಲ್ಡೀವ್ಸ್‌ ಜತೆಗೆ ರಕ್ಷಣಾತ್ಮಕ ಒಪ್ಪಂದಗಳಿಗೆ ಸಹಿ ಹಾಕಿದೆ. ಅಮೆರಿಕದ ಈ ನಡೆಯು ಭಾರತಕ್ಕೆ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next