Advertisement

ಶ್ರೀಲಂಕಾ ಸ್ಫೋಟ ಚಿತ್ರೀಕರಣ; ದೆಹಲಿ ಮೂಲದ ಫೋಟೋ ಜರ್ನಲಿಸ್ಟ್ ಬಂಧನ

09:43 AM May 04, 2019 | Nagendra Trasi |

ಕೊಲಂಬೋ:ಶ್ರೀಲಂಕಾದಲ್ಲಿ ಈಸ್ಟರ್ ಸಂಡೇ ವೇಳೆ ಸಂಭವಿಸಿದ್ದ ಸರಣಿ ಆತ್ಮಹತ್ಯಾ ಬಾಂಬ್ ದಾಳಿ ಘಟನೆ ನಂತರ ಫೋಟೋ ತೆಗೆಯಲು ತೆರಳಿದ್ದ ಭಾರತೀಯ ಮೂಲದ ಫೋಟೋ ಜರ್ನಲಿಸ್ಟ್ ಅನ್ನು ಶ್ರೀಲಂಕಾ ಬಂಧಿಸಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

ದೆಹಲಿಯಲ್ಲಿ ರಾಯಿಟರ್ಸ್ ನ್ಯೂಸ್ ಏಜೆನ್ಸಿಗೆ ಕಾರ್ಯನಿರ್ವಹಿಸುತ್ತಿದ್ದ ಸಿದ್ದಿಖಿ ಅಹ್ಮದ್ ಡ್ಯಾನಿಶ್ ಅವರು ಅಕ್ರಮವಾಗಿ ಶ್ರೀಲಂಕಾದ ಶಾಲೆಗೆ ಪ್ರವೇಶಿಸಿದ್ದು ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾನೂನು ಬಾಹಿರವಾಗಿ ಪ್ರವೇಶಿಸಿದ ಆರೋಪದ ಮೇಲೆ ಫೋಟೋ ಜರ್ನಲಿಸ್ಟ್ ಸಿದ್ದಿಖಿಯನ್ನು ಬಂಧಿಸಿದ್ದು, ನಿಗೋಂಬೋ ಮ್ಯಾಜಿಸ್ಟ್ರೇಟ್ ಮೇ 15ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next