Advertisement

ಮಾ.31ಕ್ಕೇ ರಿಟರ್ನ್ಸ್ ಸಲ್ಲಿಸಿ 

11:45 AM Feb 10, 2018 | Team Udayavani |

ಹೊಸದಿಲ್ಲಿ: ನೋಟುಗಳ ಅಮಾನ್ಯದ ಬಳಿಕ ಯಾರ್ಯಾರು ಅಧಿಕ ಮೊತ್ತದ ನಗದನ್ನು ಠೇವಣಿಯಿಟ್ಟಿದ್ದಾರೋ, ಅವರೆಲ್ಲರೂ ಮಾರ್ಚ್‌ 31ರೊಳಗೆ ರಿಟರ್ನ್ಸ್ ಸಲ್ಲಿಸಬೇಕು. ಇಲ್ಲದಿದ್ದರೆ ಅಂಥವರ ವಿರುದ್ಧ ವಿಚಾರಣೆ ಹಾಗೂ ದಂಡ ವಿಧಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಅರ್ಹ ಟ್ರಸ್ಟ್‌ಗಳು, ರಾಜಕೀಯ ಪಕ್ಷಗಳು ಮತ್ತು ಸಂಘ ಸಂಸ್ಥೆಗಳು ಕೂಡ ಆದಾಯ ತೆರಿಗೆ ರಿಟರ್ನ್ಸ್ ಗಡುವಿನೊಳಗೆ ಸಲ್ಲಿಸುವಂತೆಯೂ ಸೂಚಿಸಲಾಗಿದೆ. ಇದು ಅಂತಿಮ ಎಚ್ಚರಿಕೆ ಎಂದಿದೆ.

Advertisement

ನೇರ ತೆರಿಗೆ ಸಂಗ್ರಹ ಹೆಚ್ಚಳ: ಇದೇ ವೇಳೆ, ಪ್ರಸಕ್ತ ವಿತ್ತೀಯ ವರ್ಷದ ಏಪ್ರಿಲ್‌-ಜನವರಿ ಅವಧಿಯಲ್ಲಿ ನೇರ ತೆರಿಗೆ ಸಂಗ್ರಹವು ಶೇ.19.3ರಷ್ಟು ಹೆಚ್ಚಳವಾಗಿದ್ದು, 6.95 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ.ಕಾರ್ಪೊರೇಟ್‌ ಆದಾಯ ತೆರಿಗೆ ಶೇ.19.2,  ವೈಯಕ್ತಿಕ ಆದಾಯ ತೆರಿಗೆ ಶೇ.18.6ರಷ್ಟು ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next