Advertisement

ಸುರತ್ಕಲ್: ಬಸ್ ಚಾಲಕ,ನಿರ್ವಾಹಕನಿಂದ ರಿಕ್ಷಾ ಚಾಲಕನಿಗೆ ಯದ್ವಾ ತದ್ವಾ ಹಲ್ಲೆ

04:06 PM Jul 11, 2021 | Team Udayavani |

ಸುರತ್ಕಲ್: ಸುರತ್ಕಲ್ ಕಡೆ ಬರುವ ರಿಕ್ಷಾ ಚಾಲಕನೋರ್ವನ ಮೇಲೆ ಖಾಸಗೀ ಸರ್ವಿಸ್ ಬಸ್ ಚಾಲಕ,ಮಾಲಕ ತೀವ್ರ ಹಲ್ಲೆ ನಡೆದಿ ಗಂಭೀರ ಗಾಯಗೊಳಿಸಿದ ಘಟನೆ ರವಿವಾರ ನಡೆದಿದೆ.

Advertisement

ಹಲ್ಲೆ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸುರತ್ಕಲ್ ಪೊಲೀಸರು ಸಿಸಿ ಟಿವಿ ಪರಿಶೀಲಿಸಿದ್ದು ರಿಕ್ಷಾ ಚಾಲಕ ನೀಡಿದ ದೂರಿನಂತೆ  ಇದೀಗ ಹಲ್ಲೆ ನಡೆಸಿದವರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ಶೀಲ ಶಂಕಿಸಿ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದ ಪತಿ!

ಸುರತ್ಕಲ್ ರಿಕ್ಷಾ ಚಾಲಕ ಸುಧಾಕರ್ ಚೇಳ್ಯಾರು ಇವರ ಮೇಲೆ ನಡೆದ ಹಲ್ಲೆ ಯನ್ನು ಬಿ. ಎಮ್. ಎಸ್  ಯೂನಿಯನ್ ಆಟೋ ರಿಕ್ಷಾ ಮಾಲಕರ ಮತ್ತು ಚಾಲಕರ ಸಂಘ ಸುರತ್ಕಲ್ ಬಲವಾಗಿ ಖಂಡಿಸುತ್ತದೆ. ಆರೋಪಿಗಳ ತಕ್ಷಣ ಬಂಧನ ಆಗಬೇಕೆಂದು ಸುರತ್ಕಲ್ ಪೋಲಿಸ್ ಠಾಣಾಧಿಕಾರಿಯನ್ನು ಭೇಟಿ ಯಾಗಿ ಬಂಧನ ಆಗಬೇಕೆಂದು ಆಗ್ರಹ ಮಾಡಲಾಯಿತು. ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತಿರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next