Advertisement

ಅತ್ಯಾಚಾರ ಎಸಗಿದ ವೃದ್ಧನನ್ನು ಹತ್ಯೆಗೈದ ಸಂತ್ರಸ್ತೆಯ ಸಂಬಂಧಿಕರು

11:58 AM Dec 13, 2022 | Team Udayavani |

ಬೆಂಗಳೂರು: ಅಪ್ರಾಪ್ತೆ ಮೇಲೆ ಲೈಂಗಿಕದೌರ್ಜನ್ಯ ಎಸಗಿದ ವೃದ್ಧನನ್ನು ಸಂತ್ರಸ್ತೆಕುಟುಂಬ ಸದಸ್ಯರು ಮನ ಬಂದಂತೆ ಥಳಿಸಿ ಕೊಲೆಗೈದಿರುವ ಘಟನೆ ಹೆಣ್ಣೂರುಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಮೂವರು ಆರೋಪಿಗಳನ್ನುಬಂಧಿಸಲಾಗಿದೆ.

Advertisement

ಬಾಬೂಸಾಬ್‌ ಪಾಳ್ಯ ನಿವಾಸಿ ಕುಪ್ಪಣ್ಣ ಅಲಿಯಾಸ್‌ ಕುಪ್ಪಸ್ವಾಮಿ (73)ಕೊಲೆಯಾದ ವೃದ್ಧ. ಈ ಸಂಬಂಧ ಸಂತ್ರಸ್ತೆ ಸಂಬಂಧಿಗಳಾದ ಮಧು (22), ಕಿರಣ್‌ (23) ಮತ್ತು ಶಹಬಾಜ್‌ (25) ಬಂಧಿತರು. ಗಾರೆ ಕೆಲಸ ಮಾಡುವ ಕುಪ್ಪಣ್ಣ, ಭಾನುವಾರ ಸಂಜೆ ಮನೆ ಸಮೀಪದ 16 ವರ್ಷದ ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದ. ಈ ಸಂಬಂಧ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದರು.

ತಮಿಳುನಾಡು ಮೂಲದ ಕುಪ್ಪಣ್ಣ, ಗಾರೆ ಕೆಲಸ ಮಾಡಿಕೊಂಡಿದ್ದು, ಬಾಬುಸಾಬ್‌ ಪಾಳ್ಯದಲ್ಲಿ ಒಂಟಿಯಾಗಿ ವಾಸವಾಗಿದ್ದ. ಈತನ ಮನೆ ಸಮೀಪದಲ್ಲಿ ಸಂತ್ರಸ್ತೆ ಪೋಷಕರ ಜತೆ ವಾಸವಾಗಿದ್ದಳು. ಭಾನುವಾರ ಸಂಜೆ ಕುಪ್ಪಣ್ಣ ಮನೆ ಪಕ್ಕದಲ್ಲಿ ಒಣಹಾಕಿದ್ದ ಶಾಲಾ ಸಮವಸ್ತ್ರ ತೆಗೆದುಕೊಂಡು ಬರಲು ಹೋದಾಗ ಕುಪ್ಪಣ್ಣ ಸಂತ್ರಸ್ತೆಯನ್ನ ಮನೆಯೊಳಗೆ ಕರೆದು, ಜ್ಯೂಸ್‌ ಕೊಟ್ಟು ಕುಡಿಯಲು ಹೇಳಿದ್ದಾನೆ. ಜ್ಯೂಸ್‌ ಕುಡಿಯುತ್ತಿದ್ದಂತೆ ಆಕೆ ಅಸ್ವಸ್ಥಳಾಗಿದ್ದಾಳೆ. ಬಳಿಕ ವಿವಸ್ತ್ರಗೊಳಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದರು.

ಈ ಮಧ್ಯೆ ಪೋಷಕರು ಸಂಜೆ 7 ಗಂಟೆಯಾದರೂ ಮನೆಗೆ ಬಾರದ ಪುತ್ರಿಯನ್ನು ಎಲ್ಲೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಅನಂತರ ಅನುಮಾನಗೊಂಡು ಕುಪ್ಪಣ್ಣನ ಮನೆಯೊಳಗೆ ಹೋಗಿ ನೋಡಿದಾಗ ಬಾಲಕಿ ವಿವಸ್ತ್ರಗೊಂಡು ಬಿದ್ದಿದ್ದಳು.ಅದರಿಂದ ಆಕ್ರೋಶಗೊಂಡ ಆಕೆಯ ಪೋಷಕರು ವೃದ್ಧನ ಜತೆ ವಾಗ್ವಾದ ನಡೆಸಿದ್ದಾರೆ. ಈ ವಿಚಾರ ತಿಳಿದ ಸಂತ್ರಸ್ತೆಯ ಸಂಬಂಧಿಗಳಾದ ಮಧು,ಕಿರಣ್‌ ಹಾಗೂ ಶಹಬಾಜ್‌ ಕುಪ್ಪಣ್ಣನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದು,ಈ ವೇಳೆ ವೃದ್ಧನ ಮರ್ಮಾಂಗದ ಮೇಲೂ ಹಲ್ಲೆ ನಡೆಸಿದ್ದಾರೆ. ಅದರಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸೋಮವಾರ ಬೆಳಗ್ಗೆ ಸಂತ್ರಸ್ತೆ ಕುಟುಂಬದವರು ವೃದ್ಧನ ವಿರುದ್ಧ ಹೆಣ್ಣೂರು ಠಾಣೆಗೆ ದೂರು ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಅಸ್ವಸ್ಥಗೊಂಡಿದ್ದ ವೃದ್ಧನನ್ನು ಆಸ್ಪತ್ರೆಗೆ ಕರೆದೊಯ್ದಾಗ ಆತ ಮೃತಪಟ್ಟಿರುವುದು ದೃಢಪಟ್ಟಿದೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

Advertisement

ಜತೆಗೆ ಕೊಲೆಯಾದ ವೃದ್ಧ ಕುಪ್ಪಣ್ಣನ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಕೇಸ್‌ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next