Advertisement

ಜೀವ ಉಳಿಸು ಎಂದು ಪ್ರಾರ್ಥಿಸಿ 5 ಕಿ.ಮೀ. ವರೆಗೆ ಪಾದಯಾತ್ರೆ ಮಾಡಿದರೂ ಸ್ಪಂದಿಸದ ದೇವರು!

08:02 AM Sep 02, 2022 | Team Udayavani |

ಅಫಜಲಪುರ: ತಮಗೆ ಸರಕಾ ರದ ಯೋಜನೆಗಳನ್ನೆಲ್ಲ ಒದಗಿಸಲು ಶ್ರಮಿಸುತ್ತಿದ್ದ ಗ್ರಾ.ಪಂ. ಸದಸ್ಯರೊಬ್ಬರು ಸಾವು-ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾಗ, ಅವರು ಬೇಗ  ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿ ಗ್ರಾಮಸ್ಥರು ಸುಮಾರು ಐದು ಕಿ.ಮೀ. ವರೆಗೂ ಪಾದಯಾತ್ರೆ ಮಾಡಿ ದೇವರನ್ನು ಬೇಡಿಕೊಂಡರೂ ಪ್ರಯೋಜನವಾಗಲಿಲ್ಲ.  ಆ ಸಮಾಜಸೇವಕ ಗ್ರಾ.ಪಂ. ಸದಸ್ಯರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

Advertisement

ಮಣೂರ ಗ್ರಾ.ಪಂ. ವ್ಯಾಪ್ತಿಯ ಶೇಷಗಿರಿ ವಾಡಿಯ ಸದಸ್ಯ ಪರಮೇಶ್ವರ ವಳಸಂಗ (38) ಎನ್ನುವರು ರಸ್ತೆ ಅಪಘಾತಕ್ಕೊಳಗಾಗಿ ಸೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಗ ಗ್ರಾಮಸ್ಥರು ಶೇಷಗಿರಿಯಿಂದ-ಮಣೂರ ಗ್ರಾಮದವರೆಗೆ ಎಲ್ಲ ದೇವರಿಗೂ ಹರಕೆ ಹೊತ್ತು ದೀರ್ಘ‌ದಂಡ  ನಮಸ್ಕಾರ ಹಾಕಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next