Advertisement

ಗುರಿ ಜತೆ ಸಾಧನೆ ಹೆಜ್ಜೆ ಆತ್ಮಾವಲೋಕನ ಮಾಡಿಕೊಳ್ಳಿ

12:47 PM Feb 01, 2017 | |

ಕಲಬುರಗಿ: ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಇಟ್ಟರೆ ಸಾಲದು, ಗುರಿ ಹಾದಿಯಲ್ಲಿ  ಎಷ್ಟರ ಮಟ್ಟಿಗೆ ಸಾಧನೆ ಹೊಂದಲಾಗುತ್ತಿದೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಂಡು ಮುಂದಿನ ಹೆಜ್ಜೆ ಇಟ್ಟರೆ ಯಶಸ್ಸು ಖಂಡಿತ ಎಂದು ಭಾರತೀಯ ಸೇನೆ ಅಧಿಕಾರಿ ಕರ್ನಲ್‌ ವೆಂಕಟರೆಡ್ಡಿ ಶಿವಪುರ ಹೇಳಿದರು. 

Advertisement

ಕಾಯಕ ಫೌಂಡೇಷನ್‌ ಎಜುಕೇಷನ್‌ ಟ್ರಸ್ಟ್‌ನ ನಗರದ ಕೆಸರಟಗಿ ರಸ್ತೆಯಲ್ಲಿರುವ ಕಾಯಕ ಫೌಂಡೇಷನ್‌ ಕಾಲೇಜು ಆವರಣದಲ್ಲಿ ನಡೆದ ಕಾಯಕ ಫೌಂಡೇಷನ್‌ ಪ್ರಾಥಮಿಕ ಮತ್ತು ವಸತಿ  ಪ್ರೌಢಶಾಲೆ ಹಾಗೂ ಕಾಯಕ ಫೌಂಡೇಷನ್‌ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜುಗಳ ವಾರ್ಷಿಕ ಸ್ನೇಹ ಸಂಭ್ರಮ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಜೀವನದಲ್ಲಿ ಸಾಧನೆ ಮಾಡಲು ಆಗದು, ಎನ್ನುವುದು ಯಾವೂದು ಇಲ್ಲ. ಮಾಸಿಕವಾಗಿ, ದೈಹಿಕವಾಗಿ ಹಾಗೂ ಬೌದ್ಧಿಕವಾಗಿ ಸನ್ನದ್ಧರಾಗಿ ದೃಢತೆಯೊಂದಿಗೆ ಮುನ್ನುಗ್ಗುವ ಮೂಲಕ ಸಾಧನೆ ಮೆರೆಯಬೇಕು ಎಂದು ಹೇಳಿದರು. ಕಾಯಕ ಫೌಂಡೇಷನ್‌ ಎಜುಕೇಷನ್‌ಟ್ರಸ್ಟ್‌ ಅಧ್ಯಕ್ಷೆ ಸಪ್ನಾ ಶಿವರಾಜ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥಾಪಕ ಶಿವರಾಜ ಟಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಯಕ ಫೌಂಡೇಷನ್‌ ಪ್ರೌಢ ಶಾಲೆಯ ಪ್ರಾಂಶುಪಾಲ ವಿಜಯಕುಮಾರ ಕಟ್ಟಿಮನಿ, ಪ್ರಾಥಮಿಕ ಶಾಲೆಯ ಪ್ರಾಂಶುಪಾಲರಾದ ವೈಶಾಲಿ ಗೋತಗಿ, ಕಾಯಕ ಫೌಂಡೇಷನ್‌ ಕಾಲೇಜಿನ ಪ್ರಾಚಾರ್ಯ ವಿನಾಯಕ, ನ್ಯಾಯವಾದಿ ಬಸವರಾಜ ಬಿರಾದಾರ ಸೊನ್ನ, ಅಮೃತರೆಡ್ಡಿ ಬಸವ ಕಲ್ಯಾಣ, ಗೌರಿಶಂಕರ ಗೋಗಿ ಇದ್ದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. 

Advertisement

Udayavani is now on Telegram. Click here to join our channel and stay updated with the latest news.

Next