Advertisement

RSS ಕೈಬಿಟ್ಟಿರುವ ಮೋದಿ ಸರಕಾರ ಮುಳುಗುತ್ತಿರುವ ಹಡಗು : ಮಾಯಾವತಿ

09:47 AM May 15, 2019 | Sathish malya |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರ ಮುಳುಗುತ್ತಿರುವ ಹಡಗು ಎಂದು ಹೇಳುವ ಮೂಲಕ ಬಹುಜನ ಸಮಾಜ ಪಕ್ಷದ ಅಧಿನಾಯಕಿ ಮಾಯಾವತಿ ಅವರು ಪಿಎಂ ಮೋದಿ ವಿರುದ್ಧದ ವಾಕ್‌ ದಾಳಿಯನ್ನು ಮುಂದುವರಿಸಿದ್ದಾರೆ.

Advertisement

ಒಟ್ಟು 7 ಹಂತಗಳ 2019ರ ಲೋಕಸಭಾ ಚುನಾವಣೆಯ ಮೊದಲ ಆರು ಹಂತಗಳು ಈಗಾಗಲೇ ಮುಗಿದಿದ್ದು ಮೇ 19ರಂದು 7 ನೇ ಹಂತದ ಮತದಾನ ನಡೆಯಲಿದೆ.

“ಮೋದಿ ಸರಕಾರ ಮುಳುಗುತ್ತಿರುವ ಹಡಗು; ಆರ್‌ಎಸ್‌ಎಸ್‌ ಕೂಡ ಅದಕ್ಕೆ ಬೆಂಬಲ ನೀಡುವುದನ್ನು ನಿಲ್ಲಿಸಿದೆ. ಈಡೇರಿಸದೆ ಉಳಿದ ಭರವಸೆಗಳಿಂದಾಗಿ ನಿರಾಶರಾಗಿರುವ ಸ್ವಯಂ ಸೇವಕರು ಬಿಜೆಪಿ ಪ್ರಚಾರಕ್ಕೆ ಇಳಿಯದಿರುವುದು ಪ್ರಧಾನಿ ಮೋದಿ ಅವರನ್ನು ಕಂಗೆಡಿಸಿದೆ. ಹಾಗಾಗಿ ಮೋದಿ ಈಗ ತುಂಬ ನರ್ವಸ್‌ ಆಗಿದ್ದಾರೆ ಎಂದು ಮಾಯಾವತಿ ಟ್ವೀಟ್‌ ಮಾಡಿದ್ದಾರೆ.

ಉಭಯ ನಾಯಕರು ದಲಿತರ ಮೇಲಿನ ಹಿಂಸೆ, ದೌರ್ಜನ್ಯದ ಬಗ್ಗೆ ವಾಕ್ಸಮರ ನಡೆಸಿದ ಒಂದು ದಿನದ ತರುವಾಯ ಮಾಯಾವತಿ ಈ ಹೇಳಿಕೆ ನಿಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next