Advertisement

ಅನಂತಕುಮಾರ್‌ ಹೆಗಡೆ ಸಂಪುಟ ಸೇರ್ಪಡೆಗೆ ಐಎಂಎ ಆಕ್ಷೇಪ

12:00 PM Sep 06, 2017 | Team Udayavani |

ಬೆಂಗಳೂರು: ವೈದ್ಯರ ಮೇಲಿನ ಹಲ್ಲೆ ಪ್ರಕರಣದ ಆರೋಪ ಎದುರಿಸುತ್ತಿರುವ ಅನಂತಕುಮಾರ್‌ ಹೆಗಡೆ ಅವರನ್ನು ಕೇಂದ್ರ ಸಚಿವ ಸಂಪುಟದಲ್ಲಿ ಸೇರಿಸಿಕೊಂಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಪ್ರಧಾನಿ ನರೇಂದ್ರ ಮೋದಿಯವರಿಗೆ ಬಹಿರಂಗ ಪತ್ರ ಬರೆದಿದೆ. 

Advertisement

“ಆರೋಪ ಎದುರಿಸುತ್ತಿರುವ  ಸಂಸದರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಬದಲು ಅವರನ್ನು ಕೇಂದ್ರ ಸಂಪುಟದಲ್ಲಿ ಸ್ಥಾನ ಕೊಟ್ಟು “ಪುರಸ್ಕಾರ’ ನೀಡಿರುವುದು ಇಡೀ ವೈದ್ಯರನ್ನು  ಘಾಸಿಗೊಳಿಸಿದೆ. ಅನಂತಕುಮಾರ್‌ ಅವರನ್ನು ಸಚಿವರನ್ನಾಗಿ ಮಾಡುವ ಮೂಲಕ ತಪ್ಪು ಸಂದೇಶ ರವಾನೆ ಮಾಡಿದಂತಾಗಿದೆ.

ಹಲ್ಲೆ ಘಟನೆಯ ವಿಡಿಯೋ ತುಣುಕನ್ನು  ಪತ್ರದೊಂದಿಗೆ ಅಡಕ ಮಾಡಿ, “ಅವರಿಗೆ (ಹೆಗಡೆ) ಕೇಂದ್ರ ಸಚಿವ ಸ್ಥಾನದ ಪುರಸ್ಕಾರ ಸಿಕ್ಕಿದ್ದು ಹೇಗೇ? ಎಂದು ಐಎಂಎ ರಾಷ್ಟ್ರೀಯ ಅಧ್ಯಕ್ಷ ಡಾ.ಕೆ.ಕೆ. ಅಗರವಾಲ್‌ ಪ್ರಧಾನಿಯವರನ್ನು ಪ್ರಶ್ನಿಸಿದ್ದಾರೆ. ಸಚಿವರಾದ ತಕ್ಷಣ, ವೈದ್ಯರ ಮೇಲೆ ನಡೆಸಿದ ಹಲ್ಲೆ ಬಗ್ಗೆ ಹೆಗಡೆಯವರು ಕ್ಷಮೆ ಕೇಳಬಹುದು ಎಂಬುದು ವೈದ್ಯರ ಭಾವನೆ ಆಗಿತ್ತು. ಆದರೆ, ಹಾಗಾಗಲಿಲ್ಲ.

ಅಲ್ಲದೇ ಅವರನ್ನು ಕೌಶಲ್ಯಾಭಿವೃದ್ಧಿ ಸಚಿವರನ್ನಾಗಿ ಮಾಡುವ ಮೂಲಕ ಸಮಾಜಕ್ಕೆ ಮತ್ತೂಂದು ತಪ್ಪು ಸಂದೇಶ ರವಾನೆ ಮಾಡಿದಂತಾಗಿದೆ. “ಹಿಂಸೆಯಲ್ಲಿ ಭಾಗಿಯಾಗುವುದು ಮತ್ತು ಕ್ಷಮೆ ಕೇಳದಿರುವುದು’ ಎಂಬ ಹೊಸ ಕೌಶಲ್ಯವೊಂದನ್ನು ಉದ್ಯಮಿಗಳಿಗೆ ಹೇಳಿಕೊಡುವುದಾ? ಎಂದು ಅವರು ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next