Advertisement

ನಾನೊಬ್ಬ ಸಾಮಾನ್ಯ; ಶಿಷ್ಟಾಚಾರ ಗೊತ್ತಿಲ್ಲ: ಮೋದಿ hugplomacy

10:48 AM Jan 20, 2018 | Team Udayavani |

ಹೊಸದಿಲ್ಲಿ : ನಾನೊಬ್ಬ ಸಾಮಾನ್ಯ ಮನುಷ್ಯ; ನನಗೆ ಶಿಷ್ಟಾಚಾರ ಗೊತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಪ್ರಧಾನಿ ಮೋದಿ ಅವರು ಉತ್ತಮ ಬಾಂಧವ್ಯ ಹೊಂದಿರುವ ನಾಯಕರಿಗೆ ಅಪ್ಪುಗೆಯ ಸ್ವಾಗತ ನೀಡುವ ಮೂಲಕ “ಅಪ್ಪುಗೆ-ಮುತ್ಸದ್ದಿತನ’ವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷ ಮಾಡಿರುವ ಲೇವಡಿಗೆ ಉತ್ತರವಾಗಿ ಮೋದಿ ಈ ಮಾತುಗಳನ್ನು ಹೇಳಿದರು.

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರಿಗೆ ಪ್ರಧಾನಿ ಮೋದಿ ಆತ್ಮೀಯ ಅಪ್ಪುಗೆಯ ಸ್ವಾಗತ ನೀಡಿದ್ದರು.  ಹಿಂದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಕಾಣುವಾಗಲೂ ಮೋದಿ ಅಪ್ಪುಗೆಯ ಆತ್ಮೀಯತೆಯನ್ನು ತೋರಿದ್ದರು. ಕಾಂಗ್ರೆಸ್‌ ಪಕ್ಷ ಮೋದಿ ಅವರ ಈ ಪ್ರಚಾರ ತಂತ್ರವನ್ನು “ಅಪ್ಪುಗೆ ಮುತ್ಸದ್ದಿತನ’ದ ಪ್ರದರ್ಶನವೆಂದು ಲೇವಡಿ ಮಾಡಿತ್ತು.

ಒಂದು ವೇಳೆ ನನಗೂ ಇತರರಂತೆ  “ತರಬೇತಿ’ ಸಿಕ್ಕಿರುತ್ತಿದ್ದರೆ ನಾನೂ ಶಿಷ್ಟಾಚಾರವನ್ನು ಅನುಸರಿಸುತ್ತಿದ್ದೆ; ಹಸ್ತಲಾಘವ ಮಾಡುತ್ತಿದ್ದೆ; ವಿಶ್ವ ನಾಯಕರೊಂದಿಗೆ ನಿಂತು ಎಡ ಬಲ ನೋಡುತ್ತಿದ್ದೆ’ ಎಂದು ಪ್ರಧಾನಿ ಮೋದಿ ಕಾಂಗ್ರೆಸ್‌ಗೆ ತಿರುಗೇಟು ನೀಡಿದರು. 

“ನಾನೊಬ್ಬ ಸಾಮಾನ್ಯ ಮನುಷ್ಯ; ನನ್ನ ದೇಶಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲು ನಾನು ಯತ್ನಿಸುತ್ತೇನೆ’ ಎಂದು ಪ್ರಧಾನ ಮೋದಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು. 

Advertisement

“ನನ್ನ ಮೂಲ ಗುಣ ಏನೆಂದರೆ ಪ್ರತಿಕೂಲತೆಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುವುದೇ ಆಗಿದೆ’ ಎಂದು ಮೋದಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next