Advertisement
ಹಿಂದಿನ ಹಲವಾರು ವರ್ಷಗಳಿಂದಲೂ ಮರಳು ಆಕ್ರಮ ಸಾಗಾಣಿಕೆ ಅವಾಹ್ಯತವಾಗಿ ನಡೆಯುತ್ತ ಬಂದಿದೆ. ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಬೇಕು ಎಂದು ಅಧಿಕಾರಿಗಳಿಗೆ ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಸೂಚನೆ ನೀಡಿದ್ದರು. ಆದರೆ, ಈಗ ಮೌನ ವಹಿಸಿದ್ದಾರೆ.
Related Articles
Advertisement
ಆದರೆ, ಯಾರೂ ನಿಯಮಪಾಲಿಸದೆ ಗಾಳಿಗೆ ತೂರಿ, ನದಿ ಪಾತ್ರದಲ್ಲೇ ಮರಳು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ. ಒಂದು ಪಾಯಿಂಟ್ ನಿಂದ ಜಿಪಿಎಸ್ ಪಾಸ್ ಖರೀದಿಸಿ ಬೇರೆ ಪಾಯಿಂಟ್ ನಿಂದ ಮರಳು ಸಾಗಾಟ ಮಾಡುತ್ತಿದ್ದಾರೆ. ಜಿಪಿಎಸ್ ಆಗಿರುವ ಪಟ್ಟಾ ಜಮೀನು ಬಿಟ್ಟು ಪರವಾನಗಿ ಇಲ್ಲದೇ ಇರುವ ಜಮೀನಿನಿಂದ ಮರಳು ರಾತ್ರಿ ಎತ್ತುತ್ತಿದ್ದಾರೆ. ಸರಕಾರ ನಿಗದಿಪಡಿಸಿದ ಪ್ರಮಾಣಕ್ಕಿಂತ ಆಳವಾಗಿ ಭೂಮಿ ಕೊರೆದು ಮರಳು ತೆಗೆಯುತ್ತಿದ್ದಾರೆ. ವೇಬ್ರಿಡ್ಜ್ ಇದ್ದರೂ ನೋಡಲು ಮಾತ್ರ. ಬೋಟ್ ಮೂಲಕ ಹಾಡು ಹಗಲೆ ಮರಳು ಎತ್ತುತ್ತಿದ್ದಾರೆ.
ಇದು ತಿಳಿದೂ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಹೆಬ್ಬಳ್ಳಿ ಗ್ರಾಮದಲ್ಲಿ ಮಲಪ್ರಭಾ ನದಿಯಿಂದ 50 ಮೀಟರ್ ದೂರ ಇರಬೇಕು. ಆದರೆ, ನದಿ ದಡದಲ್ಲಿಯೇ ಅಕ್ರಮ ಮರಳು ದಂಧೆ ಮಾಡುತ್ತಿದ್ದಾರೆ. ಇನ್ನು ಋಣಭಾರ ಪ್ರಮಾಣಪತ್ರ (ಇ.ಸಿ) ಹಾಗೂ ಸರಕಾರದ ಪರವಾನಗಿಯನ್ನು ಗಾಳಿಗೆ ತೂರಿ ಬೋಟು ಮೂಲಕ ಮರಳು ತೆಗೆದು ಅಕ್ರಮ ಮರಳುಗಾರಿಕೆ ಮಾಡುತ್ತಿದ್ದಾರೆ.
ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕಾದ ಅಧಿಕಾರಿಗಳೇ ತಮಗೇನೂ ಸಂಬಂಧ ಇಲ್ಲದಂತೆ ವರ್ತಿಸುತ್ತಿರುವುದು ಅಕ್ರಮ ಮರಳು ದಂಧೆ ಕೋರರಿಗೆ ಅಕ್ರಮ ಮಾಡಲು ಹೆಚ್ಚಿದಂತಾಗಿದೆ. ತಕ್ಷಣವೇ ಇಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ರೈತರು, ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.
ಬಾದಾಮಿ ತಾಲೂಕಿನ ಮಲಪ್ರಭಾ ನದಿ ತೀರದಲ್ಲಿ ಮರಳು ಆಕ್ರಮ ಮರಳು ಸಂಗ್ರಹಿಸುತ್ತಿರುವುದನ್ನು ಮಲಪ್ರಭಾ ನದಿ ದಡದಲ್ಲಿರುವ ಮರಳು ಪಾಯಿಂಟ್ ಪರಿಶೀಲನೆ ಮಾಡಿ, ಗಡಿ ರೇಖೆ ಗುರುತಿಸಬೇಕು ಎಂದು ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. –ಜೆ.ಬಿ.ಮಜ್ಜಗಿ, ತಹಶೀಲ್ದಾರ್ ಬಾದಾಮಿ.
ಬಾದಾಮಿ ತಾಲೂಕಿನ ವಿವಿಧೆಡೆ ಅಕ್ರಮ ಮರಳು ದಂಧೆ ಮಾಡುವವರಿಗೆ ಈಗಾಗಲೇ ದಂಡ ವಿಧಿಸಲಾಗಿದೆ. ಎಲ್ಲ ಪಾಯಿಂಟ್ಗಳಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿರುವ ಬಗ್ಗೆ ಪರಿಶೀಲಿಸಿ ತಕ್ಷಣವೇ ಕ್ರಮ ತೆಗೆದುಕೊಳ್ಳುತ್ತೇನೆ. ಈ ವಿಷಯವನ್ನು ಮೇಲಧಿ ಕಾರಿಗಳ ಗಮನಕ್ಕೆ ತರುವೆ. –ಶಿವುಕುಮಾರ, ಜಿಲ್ಲಾ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿ ಬಾಗಲಕೋಟೆ.
ಶಶಿಧರ ವಸ್ತ್ರದ