Advertisement

ಎಂಎಸ್‌ಪಿಸಿ ಕೇಂದ್ರದಲ್ಲಿ ಅಕ್ರಮ ದಾಸ್ತಾನು!

07:39 AM Jul 22, 2020 | Suhan S |

ಯಳಂದೂರು: ತಾಲೂಕಿನ ಮೆಳ್ಳಹಳ್ಳಿಯಲ್ಲಿರುವ ಎಂಎಸ್‌ಪಿಸಿ(ಮಹಿಳಾ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರ) ಕೇಂದ್ರದಲ್ಲಿ ಆಹಾರದ ದಾಸ್ತಾನು ಇದ್ದರೂ ಅಂಗನವಾಡಿ ಕೇಂದ್ರಗಳಿಗೆ ಮೇ ತಿಂಗಳ ಪಡಿತರ ಇನ್ನೂ ವಿತರಣೆಯಾಗಿಲ್ಲ ಎಂದು ತಾಪಂ ಕೆಲ ಸದಸ್ಯರು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ ದೂರಿದರು.

Advertisement

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಒಳಪಡುವ ಇಲ್ಲಿಂದ ಕೊಳ್ಳೇಗಾಲ, ಯಳಂದೂರು ಹಾಗೂ ಹನೂರು ತಾಲೂಕಿನ 500 ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಿಗೆ ಆಹಾರ ಪದಾರ್ಥಗಳ ವಿತರಣೆಯಾಗುತ್ತದೆ. ಲಾಕ್‌ಡೌನ್‌ ಸಮಯದಲ್ಲಿ ಆಹಾರ ಪದಾರ್ಥಗಳ ವಿತರಣೆಯೇ ಆಗಿಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್‌ ದೂರಿದರು. ದಾಸ್ತಾನು ಬಗ್ಗೆ ಅನುಮಾನ: ಇಲ್ಲಿ ಮೇ ತಿಂಗಳಿಂದಲೂ 6 ಟನ್‌ ಕಡ್ಲೆಬೇಳೆ, 01 ಟನ್‌ ಕಡ್ಲೆಕಾಯಿ ಬೀಜ, 2 ಟನ್‌ ಸಕ್ಕರೆ, 2.5 ಟನ್‌ ತೊಗರಿಬೇಳೆ, 300 ಕಿಲೋ ಉಪ್ಪು, 110 ಕಿಲೊ ಸಾಸಿವೆ ಗೋದಾಮಿನಲ್ಲಿದೆ. ಜಿಲ್ಲಾ ನಿರೂಪಣಾಧಿಕಾರಿಗಳು ಪರಿಶೀಲಿಸಿದ್ದಾರೆ. ಇಲಾಖೆ ಉಪನಿರ್ದೇಶಕರು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಸದಸ್ಯರಾದ ವೈ.ಕೆ. ಮೋಳೆ ನಾಗರಾಜು, ನಿರಂಜನ್‌ ಆಗ್ರಹಿಸಿದರು.

ಬಿಲ್‌ ತಡೆಗೆ ಸೂಚನೆ: ಆಹಾರ ಪದಾರ್ಥಗಳ ಸ್ಯಾಂಪಲ್‌ ಪಡೆದಿದ್ದು, ಅದನ್ನು ಸಿಎಫ್ಟಿಆರ್‌ಐಗೆ ಗುಣಮಟ್ಟ ಪರಿಶೀಲನೆಗೆ ಕಳುಹಿಸಿದ್ದು, ಅಲ್ಲಿವರೆಗೂ ಜಿಲ್ಲಾಧಿಕಾರಿ, ಉಪ ನಿರ್ದೇಶಕರು ಬಿಲ್‌ ತಡೆ ಹಿಡಿ ಯ  ಬೇಕು. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ತಾಪಂ ಸದಸ್ಯರಾದ ವೆಂಕಟೇಶ್‌, ವೈ.ಕೆ.ಮೋಳೆ ನಾಗರಾಜು, ನಿರಂಜನ್‌ ಇಒ ರಾಜು, ಸಿಡಿಪಿಒ ದೀಪಾ, ಮೇಲ್ವಿಚಾರಕಿ ಸರಸ್ವತಿ, ಎಂಎಸ್‌ಪಿಸಿ ಕೇಂದ್ರದ ಮೇಲ್ವಿಚಾರಕಿ ಬೇಬಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next