Advertisement

Minister Satish Jarkiholi ಸತ್ಯ ಹೇಳಿದರೆ ಕಲ್ಲಿನಲ್ಲಿ ಹೊಡೆಯುತ್ತಾರೆ

10:09 PM Jul 28, 2024 | Team Udayavani |

ಮಂಡ್ಯ: ಸಮಾಜದಲ್ಲಿ ಹೋರಾಟವು ಕಲ್ಲು, ಮುಳ್ಳುಗಳಿಂದ ಕೂಡಿದೆ. ಪ್ರಸ್ತುತ ಸುಳ್ಳು ಹೇಳಿದರೆ ಬೆಲೆ ಜಾಸ್ತಿ, ಸತ್ಯ ಹೇಳಿದರೆ ಕಲ್ಲು ಹೊಡೆಯುತ್ತಾರೆ, ಬೈಗುಳ ಕೇಳಬೇಕಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ(Satish Jarkiholi) ಹೇಳಿದರು.

Advertisement

ತಾಲೂಕಿನ ಕಾಗೆಮಂಟಿ ಬೋರೇಗುಡ್ಡದ ಚಾರ್ವಾಕ ವೈಚಾರಿಕ ಮಹಾಮನೆಯ ಮಡಿಲಲ್ಲಿ ಸಂಸ್ಥೆಯಿಂದ ನಡೆದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಮೊದಲು ಹಕ್ಕುಗಳಿಗಾಗಿ ಹೋರಾಟ ಆರಂಭಿಸಿದವರು ಬುದ್ಧರು. ಆದರೆ ಅವರು ದೇಶ ಬಿಡಬೇಕಾಯಿತು.

2ನೇ ಶತಮಾನದಲ್ಲಿ ಬಸವಣ್ಣನವರು ಹೋರಾಟಕ್ಕೆ ಮುಂದಾಗಿ ತಮ್ಮ ಕುರ್ಚಿ ಕಳೆದುಕೊಂಡರು. ಬಳಿಕ ಅಂಬೇಡ್ಕರ್‌ ಸಮಾನತೆಗಾಗಿ ಹೋರಾಡಿದರು. ಅವರಿಗೂ ಅನ್ಯಾಯವಾಯಿತು. ಹೋರಾಟಗಾರರು ಹೆಚ್ಚು ಕಷ್ಟ ಎದುರಿಸಬೇಕಾಗುತ್ತದೆ. ಇತಿಹಾಸ ಅರಿತು ಹೋರಾಟ ಮಾಡಬೇಕಿದೆ. ಹೋರಾಟಗಾರರಿಗೆ ಸಹಕಾರ ಅಗತ್ಯವಾಗಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next