Advertisement

ವಿಜಯ್‌ಕುಮಾರ್‌ಗೆ ಟಿಕೆಟ್‌ ನೀಡದಿದ್ರೆ ಮೈತ್ರಿಗೆ ಬೆಂಬಲವಿಲ್ಲ

07:48 AM Mar 10, 2019 | Team Udayavani |

ಕೆ.ಆರ್‌.ನಗರ: ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಫರ್ಧಿಸಲು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌ಗೆ ಕಾಂಗ್ರೆಸ್‌ ಅವಕಾಶ ಕಲ್ಪಿಸದಿದ್ದರೆ ಕೆ.ಆರ್‌.ನಗರ ವಿಧಾನಸಭಾ ಕ್ಷೇತ್ರದಲ್ಲಿ ಮೈತ್ರಿ ಕೂಟದ ಅಭ್ಯರ್ಥಿಗೆ ಬೆಂಬಲ ನೀಡದಿರಲು ತಾಲೂಕು ಕಾಂಗ್ರೆಸ್‌ ಪದಾಧಿಕಾರಿಗಳು ಮತ್ತು ಮುಖಂಡರು ತೀರ್ಮಾನ ಕೈಗೊಂಡರು.

Advertisement

ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿ ನಡೆದ ಕಾಂಗ್ರೆಸ್‌ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತಲ್ಲದೇ ಕಳೆದ 20 ವರ್ಷಗಳಿಂದ ಪಕ್ಷದ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವ ಡಾ.ಬಿ.ಜೆ.ಜಯಕುಮಾರ್‌ಗೆ ಬಿ.ಫಾರಂ ನೀಡಬೇಕು ಎಂದು ಆಗ್ರಹಿಸಲಾಯಿತು. ತಾಲೂಕು ಕಾಂಗ್ರೆಸ್‌ ವಕ್ತಾರ ಸೈಯದ್‌ ಜಾಬೀರ್‌ ಮಾತನಾಡಿ, ಕ್ಷೇತ್ರದಲ್ಲಿ ವಿಜಯಕುಮಾರ್‌ಗೆ ಅವಕಾಶ ನೀಡಬೇಕು ಎಂಬುದು ತಾಲೂಕು ಕಾಂಗ್ರೆಸ್‌ ಹಕ್ಕೊತ್ತಾಯವಾಗಿದೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಡಿ.ಕಾಂತರಾಜು ಮಾತನಾಡಿ, ತಮ್ಮ ಈ ತೀರ್ಮಾನವನ್ನು ನಾವೆಲ್ಲಾ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಅಹವಾಲು ಸಲ್ಲಿಸುತ್ತೇವೆ ಎಂದು ತಿಳಿಸಿದರು. ಪಟ್ಟಣ ಯುವ ಕಾಂಗ್ರೆಸ್‌ ಅಧ್ಯಕ್ಷರೂ ಆದ ಪುರಸಭೆ ಸದಸ್ಯ ಕೆ.ಜಿ.ಸುಬ್ರಹ್ಮಣ್ಯ ಮಾತನಾಡಿ, ವಿಜಯಕುಮಾರ್‌ಗೆ ಸ್ಪರ್ಧಿಸಲು ಅವಕಾಶ ನೀಡದಿದ್ದರೆ ನಾವು ಇಲ್ಲಿ ಜೆಡಿಎಸ್‌ ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದರು. 

ಸಭೆಯಲ್ಲಿ ತಾಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷ ಭೋಜರಾಜು, ಮಾಜಿ ಅಧ್ಯಕ್ಷ ನಟರಾಜು, ಕೆ.ಆರ್‌.ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಸ್‌.ಮಹದೇವ್‌, ಜಿಲ್ಲಾ ಗ್ರಾಮಾಂತರ ಯುವ ಕಾಂಗ್ರೆಸ್‌ ಕಾರ್ಯದರ್ಶಿ ಎಲ್‌.ಬಿ.ಮಂಜುನಾಥ್‌, ಪುರಸಭೆ ಸದಸ್ಯ ಕೆ.ಎಲ್‌.ಕುಮಾರ್‌, ಮಾಜಿ ಸದಸ್ಯ ಕೆ.ವಿನಯ್‌, ಮುಖಂಡರಾದ‌ ಕೆ.ಎನ್‌.ಪ್ರಸನ್ನಕುಮಾರ್‌, ನವೀದ್‌ಪಾಷ, ಶಂಕರ್‌, ಸಂತೋಷ್‌, ಚೇತನ್‌, ಸಿದ್ದಿಕ್‌, ಅನಿಲ್‌, ಪಟೇಲ್‌ರ, ದರ್ಶನ್‌ಗೌಡ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next