Advertisement

ತುಸು ಬಿಸಿ ಹೆಚ್ಚಾದರೆ ರಾಹುಲ್‌ ಬ್ಯಾಂಕಾಕ್‌ಗೆ ಓಟ: ಅಮಿತ್‌ ಶಾ

12:50 AM May 17, 2024 | Team Udayavani |

ಮಧುಬನಿ: ತುಸು “ಬಿಸಿ ಹೆಚ್ಚಾಗು ತ್ತಿದ್ದಂತೆ’ ವಯನಾಡ್‌ ಸಂಸದ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಬ್ಯಾಂಕಾಕ್‌ಗೆ ಹೋಗುತ್ತಾರೆಂದು ಕೇಂದ್ರ ಗೃಹ ಸಚಿವರೂ ಆಗಿರುವ ಬಿಜೆಪಿ ನಾಯಕ ಅಮಿತ್‌ ಶಾ ಹೇಳಿದ್ದಾರೆ.

Advertisement

ಬಿಹಾರದ ಮಧುಬನಿಯಲ್ಲಿ ಚುನಾವಣ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅಮಿತ್‌ ಶಾ, ರಾಹುಲ್‌ ಬಾಬಾ ಬಿಹಾರ ಮತ್ತು ಮಧುಬನಿ ಅಭಿವೃದ್ಧಿ ಮಾಡುವವರೇ? ಸ್ವಲ್ಪ ಬಿಸಿ ಹೆಚ್ಚಾಗು ತ್ತದ್ದಂತೆ ರಜೆಗಾಗಿ ಬ್ಯಾಂಕಾಕ್‌, ಥೈಲ್ಯಾಂಡ್‌ಗೆ ಹೊರಟು ಹೋಗುತ್ತಾರೆ. ಆದರೆ ಮತ್ತೂಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರ ನಮ್ಮ ಸೈನಿಕರ ಜತೆಗೆ ಗಡಿಯಲ್ಲಿ ದೀಪಾವಳಿ ಆಚರಿಸುತ್ತಾರೆ. ಮಹಾಭಾರತದ ರೀತಿಯಂತೆ ಈ ಚುನಾವಣೆಯಲ್ಲಿ ಯಾರು ಯಾವ ಕಡೆ ಇದ್ದಾರೆಂಬುದು ಸ್ಪಷ್ಟವಾಗಿದೆ. ಒಂದು ಕಡೆ ಪಾಂಡವರು ಇದ್ದರೆ, ಮತ್ತೂಂದು ಕಡೆ ಕೌರವರು ಇದ್ದಾರೆ ಎಂದು ಹೇಳಿದರು.

ಉಲ್ಟಾ ನೇತು ಹಾಕುತ್ತೇವೆ: 3ನೇ ಅವಧಿಗೆ ನರೇಂದ್ರ ಮೋದಿ ಅವರು ಪ್ರಧಾನಿಯಾಗುತ್ತಿದ್ದಂತೆ ಬಿಹಾರದ ಮಧುಬನಿ ಪ್ರದೇಶದಲ್ಲಿ ಗೋ ಹತ್ಯೆಯನ್ನು ನಿಲ್ಲಿಸುತ್ತಾರೆ, ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಯಾರು ಗೋ ಹತ್ಯೆಯನ್ನು ಮಾಡುತ್ತಾರೋ ಅವರನ್ನು ಉಲ್ಟಾ ನೇತು ಹಾಕಿ, ಅವರನ್ನು ಸೀದಾ ಮಾಡುವ ಪ್ರಯತ್ನವನ್ನು ಮಾಡುತ್ತೇವೆ ಎಂದು ರ್ಯಾಲಿಯಲ್ಲಿ ಅಮಿತ್‌ ಶಾ ಅವರು ಉಗ್ರವಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next