Advertisement

Pejavara Shree ದೇವಾಲಯಗಳನ್ನು ಸ್ವಾಯತ್ತಗೊಳಿಸಿದರೆ ಸಮಾಜಮುಖಿ ಕಾರ್ಯ

05:54 PM Jul 16, 2024 | Team Udayavani |

ಮಂಗಳೂರು: ದೇವಾಲಯಗಳನ್ನು ಮೊದಲು ಸ್ವಾಯತ್ತಗೊಳಿಸುವ ಅಗತ್ಯವಿದೆ. ಸರಕಾರ ಕೈಯಿಂದ ವಿಮುಕ್ತಗೊಳಿಸಬೇಕು ಎಂದು ಈ ಹಿಂದೆ ಹಲವು ಬಾರಿ ದೇವಾಲಯಗಳನ್ನು ಆಗ್ರಹಸಿದ್ದೇವೆ. ಸರಕಾರ ತನ್ನ ಕೈಯಲ್ಲಿ ಇಟ್ಟುಕೊಂಡು ದೇವಸ್ಥಾನಗಳಲ್ಲಿ ಸಮಾಜಮುಖಿ ಕೆಲಸ ಆಗುತ್ತಿಲ್ಲ ಎನ್ನುವುದು ದೊಡ್ಡ ತಪ್ಪು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

Advertisement

ಮಂಗಳೂರಿನದಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು, ಈ ವಿಚಾರವಾಗಿ ಸರಕಾರಗಳು ಸರ್ವೋಚ್ಚ ನ್ಯಾಯಲಯದ ನಿರ್ದೇಶನವನ್ನು ಅನುಷ್ಟಾನಕ್ಕೆ ತರಬೇಕು. ದೇವಸ್ಥಾನಗಳಿಗೆ ಭಕ್ತರೇ ನೀಡಿರುವ ಸಂಪತ್ತು ಭಕ್ತರಿಗೇ ಪುನಃ ಸಿಗಬೇಕು. ಹಾಗಾದಾಗ ಮಾತ್ರ ಪ್ರತಿ ದೇವಾಲಯದಲ್ಲೂ ಶಿಕ್ಷಣ -ವೈದ್ಯಕೀಯ ಸಂಸ್ಥೆ ನಿರ್ಮಾಣ ಮಾಡಲು ಸಾಧ್ಯವಿದೆ. ಆ ಮೂಲಕ ಸಮಾಜದ ಉದ್ಧಾರವೂ ಸಾಧ್ಯವಿದೆ ಎಂದರು.

ಅಯೋಧ್ಯೆಯಲ್ಲಿ ಕಾಮಗಾರಿ ಆರಂಭ
ಅಯೋಧ್ಯೆಯಲ್ಲಿ ಕಾಮಗಾರಿಗಳು ಮತ್ತೆ ಪ್ರಾರಂಭವಾಗಿವೆ. ಪ್ರಾಣ ಪ್ರತಿಷ್ಠಯ ಮರುದಿನದಿಂದಲೇ ಬೇಕಾದ ತಯಾರಿಗಳನ್ನು ಮಾಡಿಕೊಂಡು ಕಾಮಗಾರಿಯ ಮುಂದುವರಿದ ಭಾಗ ನಡೆಯುತ್ತಲೇ ಇದೆ. ನಾಲ್ಕೈದು ದಿನದ ಹಿಂದೆ ಅಯೊಧ್ಯೆಗೆ ಹೋಗಿ ಬಂದಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next