Advertisement

ಪರಿಹಾರ ನೀಡದಿದ್ರೆ ಸರ್ಕಾರ ಬೀಳಿಸೋಣ: ಬಾಲಚಂದ್ರ

11:11 PM Aug 13, 2019 | Lakshmi GovindaRaj |

ಬೆಳಗಾವಿ: ಜಾರಕಿಹೊಳಿ ಸಹೋದರರು ಮತ್ತೆ ಸರ್ಕಾರ ಬೀಳಿಸುವ ಮಾತನಾಡಿದ್ದಾರೆ. ಅರಭಾವಿ ಕ್ಷೇತ್ರದ ಪ್ರವಾಹ ಪೀಡಿತ ಗ್ರಾಮದಲ್ಲಿ ಸಂತ್ರಸ್ತ ರನ್ನು ಉದ್ದೇಶಿಸಿ ಮಾತನಾಡು ವ ವೇಳೆ ಶಾಸಕ ಬಾಲಚಂದ್ರ ಜಾರಕಿಹೊಳಿ ನೀಡಿರುವ “ಸರ್ಕಾರ ಬೀಳಿಸುತ್ತೇವೆ’ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದರಿಂದ ಎಚ್ಚೆತ್ತುಕೊಂಡ ಬಾಲಚಂದ್ರ ಜಾರಕಿಹೊಳಿ, ಅದು ಬಾಯಿ ತಪ್ಪಿ ಬಂದ ಮಾತು.

Advertisement

ಸರ್ಕಾರ ಉರುಳಿಸುವ ಮಾತೇ ಇಲ್ಲ. ಅಂತಹ ಪ್ರಯತ್ನವನ್ನೂ ಮಾಡುವುದಿಲ್ಲ. ಈ ವಿಡಿಯೋ ವೈರಲ್‌ ಹಿಂದೆ ರಾಜಕೀಯ ಷಡ್ಯಂತ್ರ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಘಟಪ್ರಭಾ ನದಿ ಪ್ರವಾಹದಿಂದ ತೀವ್ರ ಹಾನಿ ಗೊಳಗಾದ ಅರಭಾವಿ ವಿಧಾನ ಸಭಾ ಕ್ಷೇತ್ರದ ಹಳ್ಳಿಗಳಲ್ಲಿ ಸಂಚರಿಸಿ ಜನರ ಅಹವಾಲು ಆಲಿಸಿದ್ದ ಬಾಲಚಂದ್ರ, ಅರಭಾವಿ ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂ. ಹಾನಿಯಾಗಿದೆ. ಹೆಚ್ಚಿನ ಪರಿಹಾರ ಕೊಡಲೇಬೇಕು. ಇಲ್ಲದಿದ್ದರೆ ಸರ್ಕಾರ ವನ್ನೇ ಕೆಡವೋಣ ಎಂದು ಹೇಳಿದ್ದರು. ಆಗ ಅದಕ್ಕೆ ಜನರೂ ಸಹ ಸಿಳ್ಳೆ ಹಾಕಿ ಬೆಂಬಲ ಸೂಚಿಸಿದ್ದರು.

ಶಾಸಕರ ಈ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದಲ್ಲದೆ ಮತ್ತೆ ರಾಜಕೀಯ ಗಮನ ಜಾರಕಿಹೊಳಿ ಕುಟುಂಬದ ಕಡೆ ತಿರುಗಿತ್ತು. ಇದರಿಂದ ಎಚ್ಚೆತ್ತುಕೊಂಡ ಬಾಲಚಂದ್ರ ಜಾರಕಿಹೊಳಿ ಮಂಗಳವಾರ ಸ್ಪಷ್ಟನೆ ನೀಡಿ, ಇದು ಬಾಯಿ ತಪ್ಪಿ ಬಂದ ಮಾತು. ಸರ್ಕಾರದಿಂದ ಎಲ್ಲ ರೀತಿಯ ಸಹಾಯ ಸಿಗುತ್ತಿದೆ. ಮೇಲಾಗಿ ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಸರ್ಕಾರಗಳಿವೆ. ಹೀಗಿರುವಾಗ ನಾನೇಕೆ ಸರ್ಕಾರ ಬೀಳಿಸುವ ಮಾತಾಡಲಿ. ಈ ವಿಡಿಯೋ ವೈರಲ್‌ ಹಿಂದೆ ರಾಜಕೀಯ ಷಡ್ಯಂತ್ರ ಇದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next