Advertisement

ಕುಮಾರಸ್ವಾಮಿ ಬೇಡ ಖರ್ಗೆ ಸಿಎಂ ಆಗಲಿ ಎಂದಿದ್ದೆ!:ಎಚ್‌ಡಿಡಿ 

03:25 PM Feb 27, 2019 | Team Udayavani |

ಅರಸೀಕೆರೆ: ನಾನು ಕಾಂಗ್ರೆಸ್‌ ನಾಯಕರ ಬಳಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿ ಎಂದಿದ್ದೆ. ಆದರೆ ಅವರು ಬೇಡ ನಿಮ್ಮ ಮಗ ಕುಮಾರಸ್ವಾಮಿಯೇ ಸಿಎಂ ಆಗಲಿ ಎಂದು ಒತ್ತಾಯ ಮಾಡಿದ್ದರು ಎಂದು ಮಾಜಿ ಪ್ರಧಾನಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಹೇಳಿಕೆ ನೀಡುವ ಮೂಲಕ ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ. 

Advertisement

ಅರಸೀಕೆರೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಈ ಹೇಳಿಕೆ ನೀಡಿದ್ದು, ‘ನಮ್ಮದು 37 ಸ್ಥಾನ ವಿದ್ದ ಪಕ್ಷ. ಸ್ವಾತಂತ್ರ್ಯ ತಂದು ಕೊಟ್ಟ 130 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್‌ ಪಕ್ಷ ನಮ್ಮ ಬಳಿ ನಿಂತಿತ್ತು. ಕಾಂಗ್ರೆಸ್‌ ನಾಯಕರು   ನಿಮ್ಮ ಮಗ ಸಿಎಂ ಆಗಬೇಕು ಎಂದಿದ್ದರು. ಆಗ ನಾನು, ಸಿದ್ದರಾಮಯ್ಯ 5 ವರ್ಷ ಅಧಿಕಾರ ನಡೆಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಹುದ್ದೆ ನೀಡಿ ಎಂದಿದ್ದೆ. ಕಾಂಗ್ರೆಸ್‌ ನಾಯಕರು ಬೇಡ, ”ನಿಮ್ಮ ಮಗನೆ ಸಿಎಂ ಆಗಲಿ” ಎಂದು ಒತ್ತಾಯ ಮಾಡಿದ್ದರು. ಕಾಂಗ್ರೆಸ್‌ನವರ ಒತ್ತಾಯಕ್ಕೆ ಮಣಿದು ನನ್ನ ಮಗ ಮುಖ್ಯಮಂತ್ರಿ ಆಗಿದ್ದಾನೆ’ ಎಂದು ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ. 

ಎಚ್‌ಡಿಡಿ ಅವರ ಹೇಳಿಕೆ ಲೋಕಸಭಾ ಚುನಾವಣೆಗೂ ಮುನ್ನ ಹೊಸ ಚರ್ಚೆ ಹುಟ್ಟು ಹಾಕುವ ಎಲ್ಲಾ ಸಾಧ್ಯತೆಗಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next